ಸುರತ್ಕಲ್, ನ. 30 : ಖಾಸಗಿ ಬಾರೊಂದರಲ್ಲಿ ಯುಕನೋರ್ವನನ್ನು ಮಾರಕಾಯುಧದಿಂದ ಇರಿದು ಹತ್ಯೆ ಮಾಡಿದ ಘಟನೆ ಸುರತ್ಕಲ್ ನ ಲ್ಲಿ ನಡೆದಿದೆ. ಗುಡ್ಡೆಕೊಪ್ಲ ನಿವಾಸಿ ಸಂದೇಶ್(30) ಮೃತ ದುರ್ದೈವಿ. ಸುರತ್ಕಲ್ ಜಂಕ್ಷನ್ ಬಳಿ ಖಾಸಗಿ ಬಾರ್ ನಲ್ಲಿ 11 ಗಂಟೆಗೆ ಈ ಕೃತ್ಯ ನಡೆದಿದೆ.
ಹಳೆಯ ಗೆಳೆಯರ ನಡುವೆ ಉಂಟಾದ ಭಿನ್ನಾಭಿಪ್ರಾಯವೇ ಘಟನೆಗೆ ಕಾರಣ ಎನ್ನಲಾಗಿದ್ದು ವೈಷಮ್ಯದಿಂದ ಮಾರಕಾಯುಧದಿಂದ ಇರಿದು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹಲವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.