ಪ್ರತಿಷ್ಟೆಯ ಕಣವಾಗುತ್ತಿರುವ ಉಪಚುನಾಣೆ

ಪ್ರತಿಷ್ಟೆಯ ಕಣವಾಗುತ್ತಿರುವ ಉಪಚುನಾಣೆ

ಶಿರಾ: ಬಿಜೆಪಿ, ಜೆಡಿಎಸ್ ಪಕ್ಷಗಳಿಗೆ ಶಿರಾ ಉಪ ಚುನಾವಣೆ ಪ್ರತಿಷ್ಟೆಯ ಕಣವಾಗುತ್ತಿದೆ, ಇದರಲ್ಲಿ ನಾನು ಸಚಿವನಾಗಿದ್ದಾಗ ಮಾಡಿದ ಶಿರಾ ಕ್ಷೇತ್ರದ ಅಭಿವೃದ್ದಿ ಕೆಲಸಗಳು ಮೂಲೆ ಗುಂಪಗುತ್ತಿದೆ, ೨೫೦೦ ಕೋಟಿ ಅನುದಾನ ಬಳಸಿ ಸಿರಾ ಕ್ಷೇತ್ರದ ಅಭಿವೃದ್ದಿ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ, ಉಪ ಚುನಾವಣೆಯಲ್ಲಿ ನನ್ನ ಗೆಲುವಿಗೆ ಸಹಕರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.
ಶಿರಾ ತಾಲ್ಲೂಕಿನ ತಡಕಲೂರು ಮತ್ತು ದೊಡ್ಡಬಾಣಗೆರೆ ಗ್ರಾಮಗಳಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರ ಸಬೆಯಲ್ಲಿ ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಇದ್ದಾಗ ಶಿರಾ ತಾಲೂಕಿನ ದೇವಸ್ಥಾನಗಳ ಅಭಿವೃದ್ದಿ ಕಾರ್ಯಗಳಿಗೆ ೨೧. ಕೋಟಿಗೂ ಹೆಚ್ಚು ಹಣ ಮಂಜೂರು ಮಾಡಿಸಿದ್ದೇನೆ. ಅಲ್ಲದೇ ವಿವಿಧ ಸಮುದಾಯದ ಅನುಕೂಲಕ್ಕಾಗಿ ೨೩ ಸಮುದಾಯ ಭವನಗಳನ್ನು ನೀಡಿದ್ದೆ, ಬಿಜೆಪಿ ಸರ್ಕಾರ ೯ ತಿಂಗಳಿನಿಂದ ಬಡವರಿಗೆ ಬರಬೇಕಿರುವ ಪಿಂಚಣಿ ಹಣ ನೀಡಲು ಸಾಧ್ಯವಾಗಿಲ್ಲ. ಬಿಜೆಪಿ ಪಕ್ಷ ಹೊಸ ಮನೆಗಳ ಪಟ್ಟಿ ಮಾಡುತ್ತಿರುವುದು ಚುನಾವಣೆ ಗಿಮಿಕ್ ಅಲ್ವ ಎಂದು ಮಾಜಿ ಸಚಿವ ಟಿಬಿ ಜಯಚಂದ್ರ ವ್ಯಂಗ್ಯವಾಡಿದರು.

 

ಫ್ರೆಶ್ ನ್ಯೂಸ್

Latest Posts

Featured Videos