ಕೆ.ಆರ್.ಪುರ, ಜ. 13: ಭಾರತದಲ್ಲಿ ಹಿಂದೂಗಳನ್ನು ಮತ್ತು ಮಹಮ್ಮದೀಯರನ್ನು ಗಾಂಧಿಯವರು ಒಂದು ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ನಾದುರಾಮ್ ಗೊಡ್ಸೆ ಗಾಂಧಿಜಿಯವರನ್ನು ಗುಂಡಿಕ್ಕಿ ಕೊಂದರು ಎಂದು ಹಿರಿಯ ಸ್ವತಂತ್ರ ಹೋರಾಟಗಾರ ಹೆಚ್.ಎಸ್.ದೊರೆ ಸ್ವಾಮಿ ಹೇಳಿದರು.
ಕೆ.ಆರ್.ಪುರದ ಪೋಲಿಸ್ ಕ್ವಾರ್ಟರ್ಸ್ ಬಳಿಯ ಮೈದಾನದಲ್ಲಿ ಬೆಂಗಳೂರು ಪೂರ್ವ ತಾಲ್ಲೂಕು ಪ್ರಗತಿಪರ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಆರ್ ಎಸ್ ಎಸ್ ಮತ್ತು ಬಿಜೆಪಿ ಜನರುನ್ನು ದುರುಪಯೋಗ ಮಾಡಿ ಕೊಳ್ಳುತ್ತಿದ್ದಾರೆ, ದೇಶದಲ್ಲಿ ಸಮಸ್ಯೆಗಳು ತಾಂಡವವಾಡುತ್ತಿದೆ. ಸರ್ಕಾರಿ ನೌಕರರ ಸಂಬಳ ಜಾಸ್ತಿ ಮಾಡಿ, ಬಡವರ ರಕ್ತ ಹೀರುವ ಕೆಲಸನ್ನು ಪ್ರಧಾನಿ ಮಾಡುತ್ತಿದ್ದಾರೆ ಎಂದು ದೂರಿದರು.
ವಿವಾದಾತ್ಮಕ ಮಾತುಗಳನ್ನಾಡಿ ಜನರ ದಾರಿತಪ್ಪಿಸುವ ಕೆಲಸ ಮಾಡುತ್ತಿರುವ ಬಿಜೆಪಿ ನವರು ಜನರ ಸಮಸ್ಯೆ ಬಗೆಹರಿಸಲು ಸಾದ್ಯವಾಗದಿದ್ದರೆ ನಿಮ್ಮ ಹುದ್ದೆಯಿಂದ ಹೊರ ನಡೆಯಿರಿ ಎಂದು ತಾಕೀತು ಮಾಡಿದರು.
ಈ ಬೃಹತ್ ಪ್ರತಿಭಟನೆಯಲ್ಲಿ ಮಾಜಿ ಐ.ಎ.ಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್, ಮಾಜಿ ಭಜರಂಗದಳದ ಸಂಚಾಲಕ ಹಾಗೂ ಸಾಮಾಜಿಕ ಚಿಂತಕ ಮಹೇಂದ್ರ ಕುಮಾರ್, ಸಿಪಿಎಂ ಪಕ್ಷದ ಉಮೇಶ್, ಚಿಂತಕಿ ಭವ್ಯ ನರಸಿಂಹ ಮೂರ್ತಿ, ಜಮಿಯತುಲ್ ಉಲಮ ಎ ಕರ್ನಾಟಕದ ಅಧ್ಯಕ್ಷ ಮುಫ್ತಿ ಇಫ್ತೇಕಾರ್ ಅಹ್ಮದ್ ಸಾಬ್, ಇಮಾಮ್ ಒ ಖತೀಬ್ ಜಾಮಿಯ ಹಜರತ್ ಬಿಲಾಲ್ ಸದಸ್ಯ ಮೌಲಾನಾ ಮೊಹಮ್ಮದ್ ಝಲ್ಫೇಕಾರ್ ಅಹಮದ್, ಲಿಖಿತ್ ಮಯೂರ್ ಕುಮಾರ್, ಮುಖಂಡರಾದ ದೊಡ್ಡ ಯಲ್ಲಪ್ಪ, ಗೌರಮ್ಮ, ಎಂ.ಆರ್.ವೆಂಕಟೇಶ್, ಹೂಡಿ ಗೋಪಾಲ್ ಗೌಡ, ಆಂಟೋನಿ ಸುಂದರ್ ಭಾಗವಹಿಸಿದ್ದಾರೆ.