ಚನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಸೌಂದರ್ಯ ರಜನಿಕಾಂತ್ ಎರಡನೇ ವಿವಾಹಕ್ಕೆ ಸಜ್ಜಾಗಿದ್ದು, ಪುತ್ರಿಯ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ತಲೈವಾ ರಜನಿಕಾಂತ್ ಹೆಜ್ಜೆ ಹಾಕಿರುವ ವಿಡಿಯೊ ಇದೀಗ ವೈರಲ್ ಆಗಿದೆ.
ಸೋಮವಾರ ಚೆನ್ನೈನ ಲೀಲಾ ಪ್ಯಾಲೇಸ್ ನಲ್ಲಿ ರಜನಿಕಾಂತ್ ಪುತ್ರಿ ಸೌಂದರ್ಯ ಹಾಗೂ ವಿಶಾಗನ್ ಹಸೆಮಣೆ ತುಳಿಯಲಿದ್ದಾರೆ. ಅದಕ್ಕೂ ಮೊದಲು ನಡೆದ ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ರಜನಿಕಾಂತ್, ತಮ್ಮ ಅಭಿನಯದ ಮುತ್ತು ಚಿತ್ರದ “ಒರುವಾನ್ ಒರುವಾನ್ ಮುದಲಲಿ” ಎನ್ನುವ ಗೀತೆಗೆ ಹೆಜ್ಜೆ ಹಾಕಿದ್ದಾರೆ.
ಇದಕ್ಕೂ ಮೊದಲು ಸೌಂದರ್ಯ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ತಂದೆ ರಜನಿ, ಪುತ್ರ ಹಾಗೂ ಭಾವಿ ಪತಿ ವಿಶಾಗನ್ ಅವರೊಂದಿಗಿನ ಫೋಟೋಗಳನ್ನು ಹಾಕಿ, ಜೀವನದ ಮೂರು ಪ್ರಮುಖ ಪುರುಷರು ಎಂದು ಹಾಕಿಕೊಂಡಿದ್ದಾರೆ.ಸೌಂದರ್ಯ ಅವರು ಈ ಹಿಂದೆ ಉದ್ಯಮಿ ಅಶ್ವಿನ್ ಅವರೊಂದಿಗೆ ವಿವಾಹವಾಗಿ ನಾಲ್ಕು ವರ್ಷದ ಬಳಿಕ ವಿಚ್ಛೇದನ ಪಡೆದುಕೊಂಡಿದ್ದರು. ವಿಶಾಗನ್ ಅವರಿಗೂ ಇದು ಎರಡನೇ ವಿವಾಹ ಎಂದು ತಿಳಿದುಬಂದಿದೆ.