ಸ್ವಯಂ ಪ್ರೇರಿತ ರಕ್ತದಾನ ಮಾಡಿ

ಸ್ವಯಂ ಪ್ರೇರಿತ ರಕ್ತದಾನ ಮಾಡಿ

ಚಿತ್ರದುರ್ಗ, ಸೆ. 30: ರಕ್ತದಾನ ಮಾಡಿ ಮತ್ತೋಬ್ಬರ ಜೀವನ ಉಳಿಸುವುದು ಮಹತ್ತರವಾದ ಕೆಲಸ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಬಿ.ಪಾಪಣ್ಣ ಹೇಳಿದರು.

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಯಲ್ಲದಕೆರೆಯಲ್ಲಿ ತಾಲೂಕು ಆರೋಗ್ಯ ಇಲಾಖೆ ಹಾಗೂ ವಿವಿಧ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ಪೋಷಣ್ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿ.ಬಿ.ಪಾಪಣ್ಣ  ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿ, ಮತ್ತೋಬ್ಬರ ಜೀವ ಉಳಿಸುವುದು ದೇವರಿಗೆ ಸಮಾನ ಎಂದು ಹೇಳಿದರು.

ಜೊತೆಗೆ  ಗರ್ಬಿಣಿಯರು ಆರೋಗ್ಯವಾಗಿರಬೇಕು, ಗರ್ಬಿಣಿ ಸ್ತ್ರೀಯರು ಖಿನ್ನತೆಗೆ ಒಳಪಡಬಾರದು ಆರೋಗ್ಯವನ್ನ ಕಾಪಾಡಿಕೊಂಡರೆ ಮಗು ದಷ್ಠಪುಷ್ಟವಾಗಿ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.

ಈ ಕಾರ್ಯಕ್ರಮದಲ್ಲಿ ಗರ್ಬೀಣಿ ಸ್ತ್ರೀಯರಿಗೆ ಸೀಮಂತ ಕಾರ್ಯ ಮಾಡಿದರು, ಹಲವಾರು ಯುವಕರು ಸೇರಿದಂತೆ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು‌.

ಈ ಕಾರ್ಯಕ್ರಮದಲ್ಲಿ ಡಾ. ಪಾಲಾಕ್ಷಪ್ಪ, ಪಿಡಿಓ ಶಿವಮೂರ್ತಿ, ಸುಧಾ ,ರೂಪ

ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos