ಉತ್ತರ ಕನ್ನಡ, ಏ. 10 : ಯುವತಿಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಮುಠ್ಠಳ್ಳಿ ಗ್ರಾಪಂ ವ್ಯಾಪಿಯ ಬೆಳಲಖಂಡದಲ್ಲಿ ನಡೆದಿದೆ. ಸುಮಯ್ಯಾ (20) ಮೃತ ಯುವತಿ. ಕಳೆದ ಎರಡು ದಿನಗಳಿಂದ ಈಕೆ ಮಾನಸಿಕ ಅಸ್ವಸ್ಥಳಂತೆ ವರ್ತಿಸುತ್ತಿದ್ದಳು ಎಂದು ತಿಳಿದು ಬಂದಿದೆ. ಈಕೆಯ ತಾಯಿ ನಮಾಜ್ ಮುಗಿಸಿ ಬರುವ ಸಂದರ್ಭದಲ್ಲಿಯುವತಿಯು ಸೀಮೆ ಎಣ್ಣೆಯೊಂದಿಗೆ ಶೌಚಾಲಯದ ಒಳಗೆ ಹೊಕ್ಕು ಚಿಲಕ ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.