ಮಹಿಳೆಯ ರಕ್ಷಣೆಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು

ಮಹಿಳೆಯ ರಕ್ಷಣೆಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು

ಪೀಣ್ಯ ದಾಸರಹಳ್ಳಿ, ಡಿ. 05: ಹ್ಯೂಮನ್ ರೈಟ್ಸ್ ಪ್ರೊಟೆಷನ್ ಕಮಿಟಿ (R.T.P.W.T)ಯ ರಾಜ್ಯಾಧ್ಯಕ್ಷ ಬಿ. ಎಂ. ಚಿಕ್ಕಣ್ಣ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕಮಿಟಿ ಅಧ್ಯಕ್ಷ ಮೃತ್ಯುಂಜಯ ಸಿ. ಜಯಣ್ಣ ನವರ ನೇತೃತ್ವದಲ್ಲಿ ತೆಲಂಗಾಣ ರಾಜ್ಯದಲ್ಲಿ ಪಶುವ್ಯೆದ್ಯೆ ಪ್ರಿಯಾಂಕ ರೆಡ್ಡಿಯ ಅತ್ಯಾಚಾರ ಗ್ಯೆದು ಸುಟ್ಟುಹಾಕಿದ ನರರಾಕ್ಷಸರ ಮೇಲೆ ಹಾಗೂ ಬಿಹಾರದ ಬಕ್ಸರ್ ಜಿಲ್ಲೆಯ ಕುಕುಧಾ ಎಂಬ ಗ್ರಾಮದಲ್ಲಿ ಮಹಿಳೆ ಮೇಲೆ ಅತ್ಯಾಚಾರ ಗ್ಯೆದು ಸುಟ್ಟಿರುವ ಬಗ್ಗೆ ಮತ್ತು ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಯಾಕಪುರ ಗ್ರಾಮದಲ್ಲಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ಪ್ರತಿಭಟನೆ ಮಾಡಿ ಮಹಿಳೆಯರಿಗೆ ಹಾಗೂ ಮಕ್ಕಳ ರಕ್ಷಣೆಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಹಾಗೂ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿ ಮಾಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾನೂನು ರೀತಿಯ ಕ್ರಮ ಕೈಗೊಳ್ಳಲು ಒತ್ತಾಯಿಸಿ ತಹಸಿಲ್ದಾರ್ ಗೆ ಮನವಿ ಪತ್ರ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಸಾವಿರಾರು ವಿದ್ಯಾರ್ಥಿಗಳು, ಕಮಿಟಿಯ ಮುಖಂಡರಾದ ರಘು, ಬಸವರಾಜು, ಬಾಬಾಜಾನ್, ಶ್ರೀನಾಥ್, ಪ್ರಭು ಚರಣ್, ಮಂಜುನಾಥ್ ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos