ಮುಕ್ತ ವ್ಯಾಪಾರ ಒಪ್ಪಂದ ಕೈ ರಾಜ್ಯಾದ್ಯಂತ ಪ್ರತಿಭಟನೆ

ಮುಕ್ತ ವ್ಯಾಪಾರ ಒಪ್ಪಂದ ಕೈ ರಾಜ್ಯಾದ್ಯಂತ ಪ್ರತಿಭಟನೆ

ಬೆಂಗಳೂರು, ನ. 5: ಕಾಂಗ್ರೆಸ್ ಕಾರ್ಯಕರ್ತರು  ಕೆಪಿಸಿಸಿಯಿಂದ ಬೆಂಗಳೂರಿನ ಕಂಟೋನ್ಮೇಂಟ್ ನಿಲ್ದಾಣವರೆಗೆ ಪಾದಯಾತ್ರೆಯಲ್ಲಿ ಬಂದು ರೈಲು ಮುತ್ತಿಗೆ ಹಾಕಲು ಯತ್ನಿಸಿದರು. ಇದರಿಂದಾಗಿ ಕಂಟೋನ್ಮೇಂಟ್ ರೈಲ್ವೆ ನಿಲ್ದಾಣದ ಬಳಿ  ಕೆಲಹೊತ್ತು ಗದ್ದಲ ಉಂಟಾಗಿತ್ತು. ಪೊಲೀಸರು ರೈಲು ನಿಲ್ದಾಣದ ಒಳಗಡೆ ಹೋಗದಂತೆ  ಗೇಟ್ ನಿಷೇಧ ಹೇರಿದ್ದರು

ಕೇಂದ್ರ ಸರ್ಕಾರದ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಾಪಾರ ಒಪ್ಪಂದವನ್ನು(ಆರ್ ಸಿಇಪಿ) ಕೈಬಿಡುವಂತೆ ರಾಜ್ಯಾಧ್ಯಂತ ರೈತ ಸಂಘಗಳು ಹಾಗೂ ಕಾಂಗ್ರೆಸ್ ಪ್ರತಿಭಟನೆ ನಡೆಸಿದರು. ಆರ್ ಸಿಇಪಿ ಒಡಂಬಡಿಕೆಗೆ ಕೇಂದ್ರದ ನಿರ್ಧಾರವನ್ನ ಖಂಡಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಖಂಡ್ರೆ ನೇತೃತ್ವದಲ್ಲಿ ಕೆಪಿಸಿಸಿ ಕಿಸಾನ್ ಘಟಕದಿಂದ ರೈಲ್ ರೋಕೋ ಚಳುವಳಿ ನಡೆಸಿದರು.

ಕಾಂಗ್ರೆಸ್ ಕಾರ್ಯಕರ್ತರು  ಕೆಪಿಸಿಸಿಯಿಂದ ಬೆಂಗಳೂರಿನ ಕಂಟೋನ್ಮೇಂಟ್ ನಿಲ್ದಾಣವರೆಗೆ ಪಾದಯಾತ್ರೆಯಲ್ಲಿ ಬಂದು ರೈಲು ಮುತ್ತಿಗೆ ಹಾಕಲು ಯತ್ನಿಸಿದರು. ಇದರಿಂದಾಗಿ ಕಂಟೋನ್ಮೆಟ್ ರೈಲ್ವೆ ನಿಲ್ದಾಣದ ಬಳಿ ಗದ್ದಲ ಉಂಟಾಗಿದ್ದು, ಪೊಲೀಸರು ರೈಲು ನಿಲ್ದಾಣದ ಗೇಟ್ ನಿಷೇಧ ಹೇರಿದ್ದರು. ಇನ್ನು ಪ್ರತಿಭಟನಾಕಾರರು ಗೇಟ್ ಬಾಗಿಲ ಮುಂದೆಯೇ ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ , ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು. ರೈತರನ್ನ ಹಾಗೆ ಮಾಡ್ತೀವಿ, ಹೀಗೆ ಮಾಡ್ತೀವಿ ಅಂದ್ರು. ಆದ್ರೆ ಈಗ ಮಾಡ್ತಿರೋದು ಏನು..? ಜಪಾನ್, ಕೊರಿಯಾ ಜೊತೆ ಮುಕ್ತವ್ಯಾಪಾರಕ್ಕೆ ಹೊರಟಿದೆ. ಸಹಿ ಹಾಕಿ ರೈತರನ್ನ ಬಲಿಕೊಡಲು ಹೊರಟಿದೆ. ಈಗಲೇ ರೈತರು ಸಂಕಷ್ಟದಲ್ಲಿದ್ದಾರೆ. ರಾಜ್ಯ ಪ್ರವಾಹ, ಬರದಿಂದ ತತ್ತರಿಸಿ ಹೋಗಿದ್ದಾರೆ ಇಂತಹ ಸಂದರ್ಭದಲ್ಲೇ ರೈತ ವಿರೋಧಿ ನೀತಿಗೆ ಒಪ್ಪಿದರೆ ಹೇಗೆ? ಎಂದು ಪ್ರಶ್ನಿಸಿದರು.

ಒಪ್ಪಂದಕ್ಕೆ ಯಾವುದೇ ಕಾರಣಕ್ಕೂ ಸಹಿಯಾಕಬಾರದು. ಕೃಷಿ ಉತ್ಪನ್ನಗಳ ಬೆಲೆ ಕುಸಿಯುತ್ತದೆ. ಅಡಿಕೆ, ತೆಂಗು, ಟೊಮಾಟೋ, ಸಾಂಬಾರ್ ಪದಾರ್ಥ, ಹಾಲಿನ ಬೆಲೆಯೂ ಕುಸಿಯಲಿದೆ. 1೦ ಕೋಟಿ ಹಾಲು ಉತ್ಪಾದಕರು ಕಷ್ಟಕ್ಕೆ ಸಿಲುಕ್ತಾರೆ. ಗುಜರಾತ್ ನಂತರ ನಮ್ಮ ರಾಜ್ಯವೇ ಪ್ರಮುಖ ಹಾಲು ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಒಪ್ಪಂದ ಆದ್ರೆ ರೈತರು ಬೀದಿಗೆ ಬೀಳ್ತಾರೆ. ಪ್ರಧಾನಿ ಮೋದಿಗೂ ಇದೇ ಬೇಕಾಗಿದೆ. ರೈತರನ್ನ ಬೀದಿಗೆ ಹಾಕಲು ಹೊರಟಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಈಶ್ವರ್ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದರು

 

ಫ್ರೆಶ್ ನ್ಯೂಸ್

Latest Posts

Featured Videos