ರಾಜ್ಯಾದ್ಯಂತ ‘ಜಿಗ್ರಿ’ ದೋಸ್ತ್

ರಾಜ್ಯಾದ್ಯಂತ ‘ಜಿಗ್ರಿ’ ದೋಸ್ತ್

ಬೆಂಗಳೂರು, ಆ. 15 : ಬಿ.ಎನ್.ಗಂಗಾಧರ್ ನಿರ್ಮಿಸಿರುವ `ಜಿಗ್ರಿ ದೋಸ್ತ್` ಚಿತ್ರ ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾ ಪತ್ರ ನೀಡಿದೆ. ಚಿತ್ರ ಸದ್ಯದಲ್ಲೇ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಬೆಂಗಳೂರು, ದಾಂಡೇಲಿ ಮುಂತಾದ ಕಡೆ ಚಿತ್ರಕ್ಕೆ 42 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಎಸ್.ಮೋಹನ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಚಿತ್ರ ದ ತಾರಾಬಳಗದಲ್ಲಿ ಸ್ಕಂದ ಅಶೋಕ್, ಚೇತನ್ ಸೂರ್ಯ, ವಿನೋದ್ ಆಳ್ವಾ, ಸುಷ್ಮ, ಅಕ್ಷತ ಮುಂತಾದವರಿದ್ದಾರೆ. ಚಿತ್ರಗಳಲ್ಲಿ ನಟಿಸಿರುವ ನಟ ವಿನೋದ್ ಆಳ್ವಾ ತಮ್ಮ ಯಾವುದೇ ಚಿತ್ರಕ್ಕೂ ಸ್ವತಃ ಡಬ್ಬಿಂಗ್ ಮಾಡಿಲ್ಲ. ನಮ್ಮ ಚಿತ್ರದಲ್ಲಿ ಮೊದಲ ಬಾರಿಗೆ ಅವರ ಡಬ್ಬಿಂಗ್ ಮಾಡಿದ್ದಾರೆ ಎಂದು ನಿರ್ದೇಶಕ ಮೋಹನ್ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos