ನಿಂತು ನೋಡು ಯಜಮಾನ ಹೊಸ ಹಾಡು ಬಿಡುಗಡೆ

ನಿಂತು ನೋಡು ಯಜಮಾನ ಹೊಸ ಹಾಡು ಬಿಡುಗಡೆ

ಬೆಂಗಳೂರು: ‘ಬೊಂಬೆ ಹೇಳುತೈತೆ.. ಮತ್ತೆ ಹೇಳುತೈತೆ ನೀನೇ ರಾಜಕುಮಾರ..” ಹಾಡು ಕನ್ನಡಿಗರ ಮನಸ್ಸಿಗೆ ಬಹಳ ಇಷ್ಟವಾದ ಹಾಡು. ಈಗ ಅದೇ ರೀತಿಯ ಮತ್ತೊಂದು ಹಾಡು ‘ನಿಂತ ನೋಡು ಯಜಮಾನ..’ ಎಂಬ ಹೊಸ ಹಾಡು ನಿನ್ನೆ ಬಿಡುಗಡೆಯಾಗಿದೆ.

‘ಯಜಮಾನ’ ಸಿನಿಮಾದ ಈ ಹಾಡನ್ನು ಕೇಳಿದರೆ, ‘ರಾಜಕುಮಾರ’ ಸಿನಿಮಾದ ಹಾಡು ನೆನಪಿಗೆ ಬರುತ್ತದೆ. ಮತ್ತೊಂದು ವಿಶೇಷ ಅಂದರೆ, ಆ ಹಾಡಿನ ಹಿಂದಿನ ಶಕ್ತಿಗಳೆ ಇಲ್ಲಿಯೂ ಒಂದಾಗಿದೆ.

ಬೊಂಬೆ ಹೇಳುತೈತೆ ಹಾಡನ್ನು ಬರೆದಿದ್ದು ಸಂತೋಷ್ ಆನಂದ್ ರಾಮ್, ಸಂಗೀತ ನೀಡಿದ್ದು ಹರಿಕೃಷ್ಣ, ಹಾಡಿದ್ದು ವಿಜಯ ಪ್ರಕಾಶ್. ಈಗ ನಿಂತ ನೋಡು ಯಜಮಾನ ಹಾಡನ್ನು ಕೂಡ ಹಾಡಿದ್ದು ವಿಜಯ ಪ್ರಕಾಶ್, ಬರೆದಿದ್ದು ಸಂತೋಷ್ ಆನಂದ್ ರಾಮ್ ಹಾಗೂ ವಿ ಹರಿಕೃಷ್ಣ ಸಂಗೀತ ಇದೆ.

ಹಾಡು ಕೇಳುವುದಕ್ಕೆ ಕೂಡ ಅದೇ ರೀತಿ ಭಾವ ಮೂಡುತ್ತದೆ. ಅಲ್ಲಿ ಪುನೀತ್ ರಾಜ್ ಕುಮಾರ್ ಪಾತ್ರವನ್ನು ವರ್ಣನೆ ಮಾಡಿದ್ದು, ಇಲ್ಲ ದರ್ಶನ್ ಪಾತ್ರವನ್ನು ಬಣ್ಣಿಸಲಾಗಿದೆ. ಎರಡು ಹಾಡುಗಳ ಸಾಹಿತ್ಯ ಸರಳ ಮತ್ತು ಸುಂದರವಾಗಿದೆ.

ಸದ್ಯ, ‘ನಿಂತ ನೋಡು ಯಜಮಾನ..’ ಹಾಡು ಯೂ ಟ್ಯೂಬ್ ನಲ್ಲಿ ನಂಬರ್ ಒನ್ ಟ್ರೆಂಡಿಂಗ್ ನಲ್ಲಿದೆ. ಹಾಡು ಬಿಡುಗಡೆಯಾಗಿ 22 ಗಂಟೆಗೆ 1.27 ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ.

ಫ್ರೆಶ್ ನ್ಯೂಸ್

Latest Posts

Featured Videos