ಪ್ರೇಮ ‘ನಿವೇದ’ನೆ ವಿರುದ್ಧ ಸೋಮಣ್ಣ ಗರಂ

ಪ್ರೇಮ ‘ನಿವೇದ’ನೆ ವಿರುದ್ಧ  ಸೋಮಣ್ಣ ಗರಂ

ಮೈಸೂರು ,ಅ. 5 : ಗಾಯಕ ಚಂದನ ಶಟ್ಟಿ ಹಾಗೂ ನಿವೇದಿತಾ ಗೌಡರ ವಿರುದ್ಧ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಫುಲ್ ಗರಂ ಆಗಿದ್ದಾರೆ.
ಗಾಯಕ ಚಂದನ್ ಶೆಟ್ಟಿ ಯುವ ದಸರಾ ಕಾರ್ಯಕ್ರಮದಲ್ಲಿ ಗೆಳತಿ ನಿವೇದಿತಾ ಗೌಡಗೆ ಪ್ರೇಮ ನಿವೇದನೆ ಮಾಡಿರುವ ವಿಚಾರ ಹಿನ್ನಲೆ ಸಚಿವ ವಿ ಸೋಮಣ್ಣ ಕೆಂಡಾಮಂಡಲವಾಗಿದ್ದು, ಇದು ಅಕ್ಷಮ್ಯ ಅಪರಾಧ. ಚಂದನ್ ಮತ್ತು ನಿವೇದಿತಾ ಯುವ ದಸರಾ ವೇದಿಕೆ ಚಾಮುಂಡಿಶ್ವರಿ ತಾಯಿಯ ಸನ್ನಿಧಿಯಲ್ಲಿ ಈ ರೀತಿಯ ನಡೆ ಸರಿಯಲ್ಲ. ಇನ್ನು ಆರು ತಿಂಗಳಲ್ಲಿ ಅವರಿಬ್ಬರಿಗೂ ಆ ತಾಯಿ ಶಿಕ್ಷೆ ನೀಡುತ್ತಾಳೆ. ಈ ಅಪರಾಧಕ್ಕೆ ಕ್ಷಮೆಯೇ ಇಲ್ಲ ಎಂದಿದ್ದಾರೆ.
ಇವರು ಕನ್ನಡದವರು ಸಂಸ್ಕ್ರತಿ ಗೊತ್ತಿರುವವರು ಅಂದುಕೊಂಡಿದ್ದೆ. ಆದರೆ ಇವರಿಗೆ ಸಂಸ್ಕ್ರತಿ ಇಲ್ಲ. ಇವರ ವಿರುದ್ದ ಕಾನೂನು ಕ್ರಮಕ್ಕೆ ಪೋಲಿಸ್ ಇಲಾಖೆಗೆ ಸೂಚನೆ ಕೊಟ್ಟಿದ್ದೇನೆ. ಕಾರಣ ಕೇಳಿ ನೋಟಿಸ್ ನೀಡುವುದಕ್ಕೆ ಎಸ್ಪಿಗೂ ಡೈರೈಕ್ಷನ್ ಮಾಡಿದ್ದೇನೆ.

ಫ್ರೆಶ್ ನ್ಯೂಸ್

Latest Posts

Featured Videos