“ಗಾಂಧೀಜಿಯವರನ್ನು ಕೊಂದವರಿಂದ ಬರೋದೇ ಇಂತಹ ಮಾತು” ಸಿದ್ದು

“ಗಾಂಧೀಜಿಯವರನ್ನು ಕೊಂದವರಿಂದ ಬರೋದೇ ಇಂತಹ ಮಾತು” ಸಿದ್ದು

ಕೊಪ್ಪಳ, ಏ. 4, ನ್ಯೂಸ್ ಎಕ್ಸ್ ಪ್ರೆಸ್: ನನಗೆ ಮೈಸೂರಿನ ಮೇಲೆ ಇರುವ ಪ್ರೀತಿಯಷ್ಟೇ ಕೊಪ್ಪಳದ ಮೇಲೂ ಇದೆ ಎಂದು‌ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ತಾಲೂಕಿನ ಬಸಾಪುರದಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ಯಾರೋ ಕೆಲವರು ಕಾಂಗ್ರೆಸ್​ ಬಾವುಟ ಬಳಕೆ ಮಾಡಿರಬಹುದು. ಅವರು ಕಾಂಗ್ರೆಸ್ ಕಾರ್ಯಕರ್ತರಲ್ಲ. ನಮ್ಮ ಪಕ್ಷದವರೋ ಅಥವಾ ಯಾವ ಪಕ್ಷದವರೋ ಗೊತ್ತಿಲ್ಲ. ಹಾಗೇನಾದರೂ ಬಳಕೆ ಮಾಡಿದ್ದರೆ ಚುನಾವಣಾಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎಂದರು. ಸಿದ್ದರಾಮಯ್ಯ ಕೊಲೆಗಡುಕ ಎಂಬ ಕೆ.ಎಸ್.ಈಶ್ವರಪ್ಪನವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಗಾಂಧಿಯನ್ನು ಕೊಂದವರಿಂದ ಇಂತಹ ಮಾತೇ ಬರೋದು.‌ ಬೇರೇನೂ ಬರಲು ಸಾಧ್ಯ? ಅವರಿಂದ ಒಳ್ಳೆಯ ಮಾತುಗಳು ಬರಲು ಸಾಧ್ಯವಿಲ್ಲ. ಈಶ್ವರಪ್ಪ ಮಹಾನ್ ಪೆದ್ದ. ಮೆದುಳಿಗೂ ನಾಲಿಗೆಗೂ ಹಿಡಿತ ತಪ್ಪಿದೆ. ಈಶ್ವರಪ್ಪನ ಬಗ್ಗೆ ಬಿಟ್ಟು ಬೇರೇನಾದ್ರು ಇದ್ರೆ ಕೇಳಿ ಎಂದರು.

ಮುಸ್ಲಿಮರು ಭಾರತದವರೇ ಎಂಬುದನ್ನು ಬಿಜೆಪಿಯವರು ಮರೆತುಬಿಟ್ಟಿದ್ದಾರೆ. ಬಿಜೆಪಿಗೆ ಕೆಲವು ಕಡೆ ಅಭ್ಯರ್ಥಿಗಳು ಸಿಕ್ಕಿಲ್ಲ. ಹಾಗಾಗಿ ಹಾಸನ, ಕಲಬುರಗಿಯಲ್ಲಿ ನಮ್ಮ ಕ್ಯಾಂಡಿಡೇಟ್​ಗಳನ್ನು ಕರೆದುಕೊಂಡು ಹೋಗಿ ನಿಲ್ಲಿಸಿದ್ದಾರೆ. ಈ ಬಾರಿ ಬಿಜೆಪಿ ಅಷ್ಟೊಂದು ವೀಕ್ ಆಗಿದೆ. ಈ ಚುನಾವಣೆಯಲ್ಲಿ ನಾವು 20ಕ್ಕೂ ಹೆಚ್ಚು ಸ್ಥಾನದಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos