ಸಿದ್ದುಗೆ ಟಾಂಗ್ ನೀಡಿದ ಹೆಚ್. ವಿಶ್ವನಾಥ

ಸಿದ್ದುಗೆ ಟಾಂಗ್ ನೀಡಿದ ಹೆಚ್. ವಿಶ್ವನಾಥ

ವಿಜಯಪುರ, ಅ. 21 : ‘’ನಾನು ನನ್ನ ಕುಟುಂಬ, ಸಿದ್ದರಾಮಯ್ಯ ಅಥವಾ ಅವರ ಕುಟುಂಬದವರಾರೂ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿ ಪ್ರಾಣ ಕೂಡಾ ತೆತ್ತಿಲ್ಲ ಎಂದು ಜೆಡಿಎಸ್ ಅನರ್ಹ ಶಾಸಕ ಎಚ್ ವಿಶ್ವನಾಥ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಸಾವರ್ಕರ್ ಮತ್ತವರ ಕುಟುಂಬ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದವರ ಪಟ್ಟಿಯಲ್ಲಿದ್ದರೂ ಸಾವರ್ಕರ್ಗೆ ಭಾರತ ರತ್ನ ನೀಡುವ ಬಗ್ಗೆ ವಿವಾದ ಎದ್ದಿರುವುದು ವಿಷಾಧಕರ ಎಂದರು.
ನಮ್ಮ ಆಸ್ತಿಯೂ ಹೋಗಿಲ್ಲ. ಸಾವರ್ಕರ್ ಮತ್ತವರ ಕುಟುಂಬ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದವರ ಪಟ್ಟಿಯಲ್ಲಿದೆ. ಸಾವರ್ಕರ್ ಅವರಂತಹ ನಾಯಕರು ಹೋರಾಟ ನಡೆಸಿದ್ದರ ಫಲವನ್ನು ನಾವಿಂದು ಉಣ್ಣುತ್ತಿದ್ದೇವೆ. ಅಂತಹ ನಾಯಕರ ಬಗ್ಗಿ ಇದೀಗ ವಿವಾದ ಎಬ್ಬಿಸಿರುವುದು ವಿಷಾದಕರ ಎಂದು ಸಿದ್ದರಾಮಯ್ಯಗೆ ಪರೋಕ್ಷವಾಗಿ ತಿವಿದರು.

ಫ್ರೆಶ್ ನ್ಯೂಸ್

Latest Posts

Featured Videos