ಸರ್ಕಾರದ ಹಗರಣ ಬಯಲು ಮಾಡುತ್ತಾ ಕಾಂಗ್ರೆಸ್?

  • In State
  • July 8, 2020
  • 340 Views
ಸರ್ಕಾರದ ಹಗರಣ ಬಯಲು ಮಾಡುತ್ತಾ ಕಾಂಗ್ರೆಸ್?

ಮೈಸೂರು: ರಾಜ್ಯ ಸರ್ಕಾರ ವೈದ್ಯಕೀಯ ಉಪಕರಣಗಳಲ್ಲಿ ನಡೆದಿರುವ ಹಗರಣದ ಬಗ್ಗೆ ಮಾಹಿತಿ ಕೊಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದಿರುವ ಹಗರಣದ ಬಗ್ಗೆ ಸರ್ಕಾರ ಲೆಕ್ಕ ಕೊಡಲೇಬೇಕು. ಇಲ್ಲದಿದ್ದರೆ ಬಿಡುವವರು ಯಾರು ಎಂದು ಸವಾಲೆಸೆದಿದ್ದಾರೆ.

ಸರ್ಕಾರ ಲೆಕ್ಕ ಕೊಡಲೇಬೇಕು. ಇಲ್ಲದಿದ್ದರೆ ಸರ್ಕಾರ ಹಗರಣವನ್ನು ಒಪ್ಪಿಕೊಂಡಂತಾಗುತ್ತದೆ ಎಂದರು. ದೇಶದಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ ಲಾಕ್‍ಡೌನ್ ನಿಂದ ಏನು ಪ್ರಯೊಜನವಾಗಿದೆ ಎಂದು ಪ್ರಶ್ನಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos