ಉಡುಪಿ, ನ. 02: 64 ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ರಾಜ್ಯ ಸರಕಾರಕ್ಕೆ ಉಡುಪಿ-ಚಿಕ್ಕಮಗಳೂರು ಸಂಸದೆ, ಕು. ಶೋಭಾ ಕರಂದ್ಲಾಜೆಯವರ ಬೇಡಿಕೆ.
- ಕನ್ನಡ ಭಾಷೆಯಲ್ಲಿ ಬಳಕೆಯಲ್ಲಿರುವ ತಹಸೀಲ್ದಾರ್, ದಫೇದಾರ್ ಇನ್ನಿತರ ಎಲ್ಲ ಪರ್ಷಿಯನ್ ಭಾಷೆಯ ಪದಬಳಕೆಯ ಬದಲಾಗಿ ಕನ್ನಡ ಪದಗಳ ಬಳಕೆಯನ್ನು ಮಾಡಬೇಕು.
- ಬ್ರಿಟಿಷ್ ಹೆಸರುಗಳಿರುವ ಬೆಂಗಳೂರಿನ ರಸ್ತೆ ಹಾಗೂ ವೃತ್ತಗಳಿಗೆ ಕನ್ನಡದ ಏಕೀಕರಣಕ್ಕಾಗಿ ಶ್ರಮಿಸಿದ, ಕನ್ನಡ ಭಾಷೆ, ನಾಡು-ನುಡಿಗೆ ಹೆಚ್ಚಿನ ಕೊಡುಗೆಯನ್ನು ನೀಡಿದ ಮಹಾನುಭಾವರ ಹೆಸರನ್ನು ಇಟ್ಟು ಗೌರವ ಸೂಚಿಸಬೇಕು.
- ಕರ್ನಾಟಕದಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವ ಪ್ರತಿಯೊಬ್ಬರೂ ಕೂಡ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಕಲಿಯುವಂತಾಗಬೇಕು, ರಾಜ್ಯದ ಎಲ್ಲ ಶಾಲೆಗಳಲ್ಲಿ, ಸಿ ಬಿ ಎಸ್ ಸಿ/ಐ ಸಿ ಎಸ್ ಸಿ ಶಾಲೆಗಳನ್ನು ಒಳಪಡಿಸಿ ಕಡ್ಡಾಯವಾಗಿ ಕನ್ನಡ ಒಂದು ಕಲಿಕೆಯ ವಿಷಯವಾಗ ಬೇಕು ಎಂದು ಮನವಿ ಮಾಡಿಕೊಂಡರು.