ಸನ್ಮಾನವೋ, ಅವಮಾನವೋ

ಸನ್ಮಾನವೋ, ಅವಮಾನವೋ

ಕೊಪ್ಪಳ, ಜ. 10 : ಐತಿಹಾಸಿಕ ಆನೆಗೊಂದಿ ಉತ್ಸವಕ್ಕೆ ಅದ್ಧೂರಿ ಚಾಲನೆ ದೊರಕಿದೆ. ಸಿಎಂ ಅನುಪಸ್ಥಿತಿಯಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ಉತ್ಸವಕ್ಕೆ ಚಾಲನೆ ನೀಡಿದರು. ಬಳಿಕ ನಡೆದ ವಿವಿಧ ಕಾರ್ಯಕ್ರಮಗಳು ನೆರೆದಿದ್ದ ಪ್ರೇಕ್ಷಕರಿಗೆ ಮನೋರಂಜನೆ ನೀಡಿದರೆ ಇನ್ನು ಕೆಲವು ಕಾರ್ಯಕ್ರಮಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದವು.
ಒಂದೆಡೆ ಹಂಪಿ ಉತ್ಸವಕ್ಕೆ ಕೌಂಟ್ಡೌನ್ ಶುರುವಾಗಿದ್ರೆ, ಮತ್ತೊಂದೆಡೆ ಕೊಪ್ಪಳದ ಐತಿಹಾಸ ಆನೆಗೊಂದಿ ಉತ್ಸವ ಮನಸೂರೆಗೊಂಡಿದೆ. ಸಿಎಂ ಅನುಪಸ್ಥಿತಿಯಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ಉತ್ಸವಕ್ಕೆ ಚಾಲನೆ ನೀಡಿದರು.
ಆನೆಗೊಂದಿ ಉತ್ಸವದ ಮೊದಲ ದಿನ ಬೆಳಗ್ಗೆಯಿಂದ ವಿವಿಧ ಕ್ರೀಡಾ ಹಾಗೂ ಸಾಹಿತ್ಯ ಕಾರ್ಯಕ್ರಮಗಳು ನಡೆದ್ವು. ಇನ್ನು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳ ಲೋಕವೇ ಅನಾವರಣಗೊಂಡಿತು. ಮೊದಲು ಹಾಸ್ಯ ಭಾಷಣಕಾರ ಪ್ರಾಣೇಶ್ರ ನಗೆ ಹಬ್ಬ, ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು. ಬಳಿಕ ಮಾಸ್ಟರ್ ಅರ್ಜುನ್ ಇಟಗಿಯ ಗಾನಬಜಾನಾ ಪ್ರೇಕ್ಷಕರಿಗೆ ರಸದೌತಣ ನೀಡ್ತು.

ಫ್ರೆಶ್ ನ್ಯೂಸ್

Latest Posts

Featured Videos