ಹಾವೇರಿ, ಡಿ. 14 : ರಾಣೇಬೆನ್ನೂರು ಕ್ಷೇತ್ರದ ನೂತನ ಬಿಜೆಪಿ ಶಾಸಕ ಅರುಣಕುಮಾರ ಪೂಜಾರ ವಿಧನಾಸೌಧಕ್ಕೆ ಮಂಡಿಯೂರಿ ನಮಸ್ಕರಿಸಿ ಒಳಗೆ ಪ್ರವೇಶ ಮಾಡಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.
ಅರುಣಕುಮರ ಪೂಜಾರ ತಮ್ಮ ಬೆಂಬಲಿಗರು ಹಾಗೂ ಕಾರ್ಯಕರ್ತರ ಜೊತೆಗೆ ಬೆಂಗಳೂರಿಗೆ ಹೋಗಿದ್ದರು. ಅಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ನಂತರ ವಿಧಾನಸೌಧಕ್ಕೆ ಆಗಮಿಸಿದರು.
ನೂತನ ಅರುಣಕುಮಾರ ಪೂಜಾರ ಮೊದಲ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ವಿಧಾನಸೌಧ ಒಳಗೆ ಪ್ರವೇಶ ಮಾಡುವ ವೇಳೆ ಮಂಡಿಯೂರಿ ನಮಸ್ಕರಿಸಿದ್ದಾರೆ. ನೂತನ ಶಾಸಕರಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಈ ವೇಳೆ ಮಾತನಾಡಿದ ಅವರು, ವಿಧಾನಸೌಧ ದೇವಸ್ಥಾನವಿದ್ದಂತೆ. ಮೊದಲ ಬಾರಿ ನನ್ನ ಕ್ಷೇತ್ರದ ಜನರು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಅವರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುತ್ತೆನೆ. ಹೀಗಾಗಿ ದೇವಾಲಯಕ್ಕೆ ಶಿರ ಭಾಗಿ ನಮಸ್ಕರಿಸಿ ಒಳಗೆ ಬಂದಿದ್ದೇನೆ ಎಂದರು.