ಆರ್​​ಟಿಐ ಕಾರ್ಯಕರ್ತನಿಂದ ಅಸಭ್ಯ ವರ್ತನೆ: ದೂರು

ಆರ್​​ಟಿಐ ಕಾರ್ಯಕರ್ತನಿಂದ ಅಸಭ್ಯ ವರ್ತನೆ: ದೂರು

ಬೆಂಗಳೂರು: ಆರ್​​ಟಿಐ ಕಾರ್ಯಕರ್ತನೊಬ್ಬ ತನ್ನ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಅಸಭ್ಯ ವರ್ತನೆ ತೋರಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಈ ಘಟನೆ ಪಾಪರೆಡ್ಡಿ ಪಾಳ್ಯ ನಾಗರಭಾವಿ ಬಳಿ ನಡೆದಿದೆ.

ಸಂತ್ರಸ್ತ ಮಹಿಳೆ ಕಷ್ಟ ಇರುವ ಹಿನ್ನೆಲೆ ಆರ್​ಟಿಐ ಕಾರ್ಯಕರ್ತ ಜಯಕುಮಾರ್​ ಎಂಬಾತನ ಬಳಿ ಸಹಾಯ ಮಾಡುವಂತೆ ಕೇಳಿಕೊಂಡಿದ್ದಳು. ಹಾಗಾಗಿ ಜಯಕುಮಾರ್​​ ಆಕೆಗೆ ಮತ್ತೊಬ್ಬ ಆರ್​ಟಿಐ ಕಾರ್ಯಕರ್ತ ಭಾಸ್ಕರನ್​ ಎಂಬುವರಿಂದ ಹಣ ಕೊಡಿಸಿದ್ದರು. ಆದ್ರೆ ಮಹಿಳೆ ಹಣವನ್ನು ವಾಪಾಸ್​ ನೀಡಿಲ್ಲ ಎಂಬ ಕಾರಣಕ್ಕೆ ಜಯಕುಮಾರ್​ ಅವರ ಮನೆಯಲ್ಲಿಯೇ ಕೆಲಸ ಮಾಡುವಂತೆ ಹೇಳಿದ್ದರು.

ಮಹಿಳೆ ಮನೆಯಲ್ಲಿ ಕೆಲಸ ನಿರ್ವಹಿಸುವಾಗ ಆತ ಮೈ ಮುಟ್ಟಿ, ಮಂಚಕ್ಕೆ ಕರೆದು ಅಸಭ್ಯ ವರ್ತನೆ ತೋರಿದ್ದಾನೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾಳೆ. ಸದ್ಯ ನೊಂದ ಮಹಿಳೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos