ರಾಜ್​​, ವಿಷ್ಣು, ಅಂಬಿ ಸ್ಮಾರಕ ಒಂದೇ ಕಡೆಯಿದ್ರೆ ಚಂದ: ಶಿವರಾಜ್ ಕುಮಾರ್

ರಾಜ್​​, ವಿಷ್ಣು, ಅಂಬಿ ಸ್ಮಾರಕ ಒಂದೇ ಕಡೆಯಿದ್ರೆ ಚಂದ: ಶಿವರಾಜ್ ಕುಮಾರ್

ಬೆಂಗಳೂರು, ಏ. 24, ನ್ಯೂಸ್ ಎಕ್ಸ್ ಪ್ರೆಸ್: ಡಾ! ರಾಜ್ ಕುಮಾರ್, ಡಾ! ವಿಷ್ಣುವರ್ಧನ್ ಹಾಗೂ ಡಾ! ಅಂಬರೀಶ್ ಸ್ಮಾರಕಗಳು ಒಂದೇ ಕಡೆ ಆಗಬೇಕೆಂಬುದು ನನ್ನ ಬಯಕೆ ಎಂದು ನಟ ಶಿವರಾಜ ಕುಮಾರ್​ ಹೇಳಿದ್ರು.

ಇಂದು ಕರುನಾಡ ದೀಪ ಅಣ್ಣಾವ್ರ 91ನೇ ಹುಟ್ಟು ಹಬ್ಬದ ನಿಮಿತ್ತ ಕಂಠೀರವ ಸ್ಟುಡಿಯೋದಲ್ಲಿರುವ ರಾಜಕುಮಾರ್​ ಸ್ಮಾರಕಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಶಿವಣ್ಣ, ರಾಘಣ್ಣ, ಹಾಗೂ ಲಕ್ಷ್ಮೀ ಕುಟುಂಬ ಸಮೇತ ಬಂದು ಅಪ್ಪನ ಸ್ಮಾರಕಕ್ಕೆ ಪೂಜೆ ಮಾಡಿದ್ರು. ಈ ವೇಳೆ ಮಾತನಾಡಿದ ಶಿವಣ್ಣ, ಮೂವರು ದಿಗ್ಗಜರ ಸ್ಮಾರಕಗಳ ಕುರಿತು ತಮ್ಮ ಮನದ ಬಯಕೆ ಹೊರಹಾಕಿದ್ರು.

ಫ್ರೆಶ್ ನ್ಯೂಸ್

Latest Posts

Featured Videos