ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಶ್ರೀ ಶಿರಡಿ ಸಾಯಿ ಮೇಣದ ಪ್ರತಿಮೆ ಪ್ರತಿಷ್ಠಾಪನೆ

ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಶ್ರೀ ಶಿರಡಿ ಸಾಯಿ ಮೇಣದ ಪ್ರತಿಮೆ ಪ್ರತಿಷ್ಠಾಪನೆ

ಬೆಂಗಳೂರು, ಜು. 15: ಗುರುಪೂರ್ಣಿಮೆ ಅಂಗವಾಗಿ ಜೆಪಿ ನಗರದ ಸತ್ಯಸಾಯಿ ಗಣಪತಿ ದೇವಸ್ಥಾನದಲ್ಲಿ ಸಾಯಿ ನಿಜರೂಪದ ಮೇಣದ ಪ್ರತಿಮೆ ಸ್ಥಾಪನೆ

ಭಕ್ತರಿಗೆ ಸದಾ ವಿಶಿಷ್ಟವಾದ ಹಾಗೂ ಹೊಸದಾದ ಅನುಭವ ನೀಡುವ ನಿಟ್ಟಿನಲ್ಲಿ ಯೋಚನೆ ಮಾಡುವ ಜೆಪಿ ನಗರದ ಶ್ರೀ ಸತ್ಯಗಣಪತಿ ಸಾಯಿ ಟ್ರಸ್ಟ್, ಈ ಬಾರಿಯ ಗುರು ಪೂರ್ಣಿಮೆಗೆ ನಗರದಜನರಿಗೆ ಅಭೂತಪೂರ್ವ ಅನುಭವ ನೀಡಲು ಸಜ್ಜಾಗಿದೆ.

ಶಿರಡಿ ಸಾಯಿ ಬಾಬ ಅವರ ಸನ್ನಿಧಾನ ಹೊರತುಪಡಿಸಿದರೆ ಬೆಂಗಳೂರು ನಗರದಲ್ಲೇ ಅತ್ಯಂತ ವಿಭಿನ್ನ ಹಾಗೂ ವಿಶೇಷವಾದ ಅಲಂಕಾರವನ್ನು ಈ ದೇವಸ್ಥಾನದಲ್ಲಿ ಮಾಡಿರುವ ಜೊತೆಯಲ್ಲಿಯೇ, ರಾಜ್ಯದಲ್ಲಿಯೇ ಮೊತ್ತಮೊದಲಬಾರಿಗೆ ಶ್ರೀ ಶಿರಡಿ ಸಾಯಿ ಬಾಬಾ ಅವರ ನಿಜರೂಪದ ದರ್ಶನ ನೀಡುವ ಮೇಣದ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗುತ್ತದೆ.

ಈ ಬಗ್ಗೆ ವಿವರಿಸಿದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟಿನ ವ್ಯವಸ್ಥಾಪಕ ಟ್ರಸ್ಟಿ ರಾಮ್ ಮೊಹನ ರಾಜ್, ಪ್ರತಿ ಬಾರಿಯೂ ಗುರುಪೂರ್ಣಿಮೆಯ ಸಂಧರ್ಭದಲ್ಲಿ ಭಕ್ತರುಗಳಿಗೆ ಹೊಸ ಅನುಭವವನ್ನು ನೀಡುವುದು ನಮ್ಮ ಉದ್ದೇಶ. ನಮ್ಮ ದೇವಸ್ಥಾನದಲ್ಲಿ ಬೇರೆ ಯಾವ ದೇವಸ್ಥಾನದಲ್ಲೂ ಸಾಟಿಯಿಲ್ಲದ ರೀತಿಯಲ್ಲಿ ಅಲಂಕಾರ ಮಾಡುವುದು ನಮ್ಮ ಉದ್ದೇಶವಾಗಿದೆ. ಅಲ್ಲದೆ ಈ ಬಾರಿ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ನಗರದ ಭಕ್ತರುಗಳಿಗೆ ಶಿರಡಿ ಸಾಯಿಬಾಬಾ ಅವರ ನಿಜರೂಪದ ದರ್ಶನ ನೀಡಲು, ಜೀವ ಕಳೆಯನ್ನು ಹೊಂದಿರುವ ಮೇಣದ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ತೀರ್ಮಾನಿಸಿದ್ದೇವೆ. ಹಾಗೆಯೇ, ಈ ಪ್ರತಿಮೆ ಪ್ರತಿಷ್ಠಾನೆಯ ಕೋಣೆಯನ್ನು ಸೌಂಡ್ ಪ್ರೂಫ್ ಆಗಿನಿರ್ಮಿಸಿದ್ದೇವೆ. ಈ 900 ಅಡಿಗಳ ಅಗಲದ ಧ್ಯಾನ ಮಂದಿರದಲ್ಲಿ ಭಕ್ತರುಗಳು ತಮ್ಮ ಅನುಕೂಲದಷ್ಟು ಸಮಯವನ್ನು ಧ್ಯಾನದಲ್ಲಿ ಕಳೆಯಬಹುದಾಗಿದೆ ಎಂದರು.

ವೈಜಾಗ್ ನ ಕಲಾಕಾರರೊಬ್ಬರ ಹಸ್ತದಲ್ಲಿ ಅರಳಿರುವ ಈ ಮೇಣದ ಪ್ರತಿಮೆ ನಾಲ್ಕುವರೆ ಅಡಿಗಳದ್ದಾಗಿದೆ. ಬಂಡೆಗಳ ಮೇಲೆ ಕೂತು ಭಕ್ತರ ಅಳಲನ್ನು ಆಲಿಸುತ್ತಿರುವ ಸಾಯಿ ಬಾಬ ಅವರ ಮೂರ್ತಿ ಇದಾಗಿದ್ದು ಬಹಳಷ್ಟುಸುಂದರವಾಗಿ ಮೂಡಿಬಂದಿದೆ.

ಇದಲ್ಲದೆ, ದೇವಸ್ಥಾನವನ್ನು ತೆಂಗಿನ ಕಾಯಿ, ಫಲಪುಷ್ಪಾದಿಗಳಿಂದ ದೇವಸ್ಥಾನವನ್ನು ಅಲಂಕರಿಸಲಾಗಿದೆ. 20ಕ್ಕೂ ಹೆಚ್ಚು ಕಲಾವಿದರು ಕಳೆದ 7 ದಿನಗಳಿಂದ ಈ ಆಲಂಕಾರವನ್ನು ಮಾಡುತ್ತಿದ್ದು, ಬೇರೆ ಯಾವುದೇ ದೇವಸ್ಥಾನಕ್ಕೂಸಾಟಿಯಿಲ್ಲದ ರೀತಿಯಲ್ಲಿ ಆಲಂಕಾರ ಮಾಡಲಾಗಿದೆ ಎಂದು ಹೇಳಿದರು.

ನಾಳೆ ಬೆಳಿಗ್ಗೆ 6 ಗಂಟೆಗೆ ಸಾಮೂಹಿಕ ಅಭಿಷೇಕದಿಂದ ವಿಶೇಷ ಕಾರ್ಯಕ್ರಮಗಳು ಪ್ರಾರಂಭವಾಗಲಿವೆ. ದತ್ತಾತ್ರೇಯ ಅಭಿಷೇಕ, ಫಲಪಂಚಾಮೃತ ಅಭಿಷೇಕ ಮತ್ತು ಸಾಮೂಹಿಕ ಹಾಲಿನ ಅಭಿಷೇಕನಡೆಯಲಿದೆ. ಅಲ್ಲದೆ ಸುದರ್ಶನ ಹೋಮ ಮತ್ತು ಸಾಯಿನಾಥ ಹೋಮವನ್ನು ಆಯೋಜಿಸಲಾಗಿದ್ದು ಮಧ್ಯಾಹ್ನ 12.30 ಕ್ಕೆ ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.

 

 

ಫ್ರೆಶ್ ನ್ಯೂಸ್

Latest Posts

Featured Videos