ಕೊಟ್ಟೂರು : ಕ್ವಾರಿ ಕಾರ್ಮಿಕರ ಸಂಘ ಎಐಟಿಯುಸಿ ತಾಲೂಕಿನ ನಾಗರಕಟ್ಟೆ ಗ್ರಾಮ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು. ಅಧ್ಯಕ್ಷರನ್ನಾಗಿ ಏ.ಕೆ. ಚೌಡಪ್ಪ, ಉಪಾಧ್ಯಕ್ಷರಾಗಿ ಮರುಳಸಿದ್ಧ, ಕಾರ್ಯದರ್ಶಿ ಮಂಜುನಾಥ್, ಸಂಚಾಲಕ ಏಕಲವ್ಯ, ಸಂಘಟನಾ ಸಂಚಾಲಕರಾಗಿ ಸಂತೋμï ಹಾಗೂ ಆರು ಜನ ಕಾರ್ಯಕಾರಿ ಸಮಿತಿ ಸದಸ್ಯರನ್ನೊಳಗೊಂಡ ಎಲ್ಲ ಸರ್ವ ಸದಸ್ಯರ ಸಮಿತಿಯನ್ನು ಬುಧಾವಾರ ರಚಿಸಲಾಯಿತು.
ಇದೇ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷರಾದ ಯು.ಪೆನ್ನಪ್ಪ, ಗ್ರಾಮ ಪಂಚಾಯತಿ ಸದಸ್ಯರು ಯಶವಂತ್ ಗ್ರಾಮದ ಮುಖಂಡ ಏ.ಕೆ ಸಿದ್ದಲಿಂಗಪ್ಪ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ದೇವೇಂದ್ರಪ್ಪ ತೂಲಹಳ್ಳಿ ಕಾರ್ಮಿಕ ಸಂಘಟನೆ ಅಧ್ಯಕ್ಷರು ಹಾಗೂ ಖಜಾಂಚಿ ಕರಿಬಸಪ್ಪ ಹನುಮಂತಪ್ಪ ಕುರುಬನಹಳ್ಳಿ ಬಸವರಾಜ ವಿ ಎಚ್. ಹನುಮನಹಳ್ಳಿ ಮುನ್ನ ಮಂಗನಹಳ್ಳಿ ಅಂಜಿನಪ್ಪ ಕೂಡ್ಲಿಗಿ ಕಾರ್ಮಿಕ ಮುಖಂಡ ಹಾಗೂ ಸಿಪಿಐ ಕಾರ್ಯದರ್ಶಿ ಹೆಚ್. ವೀರಣ್ಣ ಉಪಸ್ಥಿರಿದ್ದರು.