ಪುಟ್ಟಾಣಿ ಮಗುವಿನ ಜೀವ ಉಳಿಸಿ

ಪುಟ್ಟಾಣಿ ಮಗುವಿನ  ಜೀವ ಉಳಿಸಿ

ಕೊಯಮತ್ತೂರುಜೂ. 20: ಈ ಪುಟಾಣಿ ಮಗು ಈ ಜಗತ್ತಿಗೆ ಆಗಮಿಸಿ ಕೇವಲ 25 ದಿನಗಳಾಗಿವೆ.  ಮಗುವಿನ ಅನಾರೋಗ್ಯದ ಕಾರಣದಿಂದಾಗಿ ಪೋಷಕರು ಕೂಡ ಕಣ್ಣೀರ ಕಡಲಿನಲ್ಲಿ ಕೈ ತೊಳೆಯುವಂತಾಗಿದೆ. ಮಗುವಿನ ಹೃತ್ಕುಕ್ಷಿಯಲ್ಲಿ ರಂಧ್ರವುಂಟಾಗಿ ತೊಂದರೆ ಇರುವುದರಿಂದ ಮಗುವಿನ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ತಕ್ಷಣ ಶಸ್ತ್ರಚಿಕಿತ್ಸೆ ಮಾಡಬೇಕೆಂದು ಕೊಯಮತ್ತೂರಿನಲ್ಲಿರುವ ಕುಪ್ಪುಸ್ವಾಮಿ ನಾಯ್ಡು ಮೆಮೋರಿಯಲ್ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆಗೆ ಕನಿಷ್ಠ 3 ಲಕ್ಷ ರೂ. ಅವಶ್ಯಕತೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮಗುವಿನ ತಂದೆ ದಿನಗೂಲಿ ನೌಕರನಾಗಿ ದುಡಿಯುತ್ತಿದ್ದು, ಇಷ್ಟು ಹಣವನ್ನು ಹೊಂದಿಸಲು ಹರಸಾಹಸಪಡುತ್ತಿದ್ದಾನೆ. ಪಿಳಿಪಿಳಿ ಕಣ್ಣು ಬಿಟ್ಟುಕೊಂಡು ಕೆಲವೇ ದಿನಗಳ ಹಿಂದೆ ಈ ಜಗತ್ತಿಗೆ ಆಗಮಿಸಿರುವ ಮಗು ಬದುಕಬೇಕಿದ್ದರೆ ದಾನಿಗಳು ತಮ್ಮ ಹೃದಯಾಂತರಾಳದಿಂದ ದಾನ ಮಾಡಬೇಕಾಗಿದೆ. ಹಲವಾರು ಜನರು ಹಣ ನೀಡಲು ಆರಂಭಿಸಿದ್ದು, ಕನಿಷ್ಠ 3 ಲಕ್ಷ ರೂ. ಜಮಾ ಆಗಬೇಕಿದೆ. ಮಗುವಿನ ಆರೋಗ್ಯ ಸ್ಥಿತಿಗೆ ಸಂಬಂಧಿಸಿದಂತೆ ಹೃದಯತಜ್ಞ ಡಾ. ಎಂ ಕಲ್ಯಾಣಸುಂದರಂ ಅವರು ನೀಡಿರುವ ಎಲ್ಲ ದಾಖಲೆಗಳನ್ನು ದಾನ ಮಾಡಬೇಕೆಂದುಕೊಂಡರು ದಾಖಲೆಗಳನ್ನು ಪರಿಶೀಲಿಸಿ, ನಂತರ ದಾನ ಮಾಡಬಹುದು.

ಫ್ರೆಶ್ ನ್ಯೂಸ್

Latest Posts

Featured Videos