ಜೈಲಲ್ಲಿ ಕೈದಿಗಳು ಮಾರಾಮಾರಿ

ಜೈಲಲ್ಲಿ ಕೈದಿಗಳು ಮಾರಾಮಾರಿ

ಹುಬ್ಬಳ್ಳಿ, ಡಿ.26 : ಕ್ಷುಲ್ಲಕ ಕಾರಣಕ್ಕೆ ವಿಚಾರಣಾಧೀನ ಕೈದಿಗಳಿಬ್ಬರು ಕಲ್ಲಿನಿಂದ ಹೊಡೆದಾಡಿಕೊಂಡ ಘಟನೆ ಇಲ್ಲಿನ ವಿಶ್ವೇಶ್ವರನಗರದ ಉಪಕಾರಾಗೃಹದಲ್ಲಿ ನಿನ್ನೆ ಸಂಜೆ ನಡೆದಿದ್ದು, ಈ ಘಟನೆಯಲ್ಲಿ ಒಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.ರಾಯನಾಳ್ ಗ್ರಾಮದ ಸಿದ್ದಪ್ಪ ಗದಿಗೆಪ್ಪ ಕೋಳೂರು ಎಂಬುವನೇ ಗಾಯಗೊಂಡ ಕೈದಿಯಾಗಿದ್ದಾನೆ.ತಾಲ್ಲೂಕಿನ ದೊಡ್ಡಸಮುದ್ರ ಗ್ರಾಮದ ಖಾದರ್ಸಾಬ್ ಮಹಮ್ಮದ್ಸಾಬ್ಮುನಿಯಾರ್ (40) ಹಲ್ಲೆ ನಡೆಸಿದ ವಿಚಾರಣಾಧೀನ ಕೈದಿ.
ಘಟನೆ ವಿವರ: ನಿನ್ನೆ ಸಂಜೆ 5 ಗಂಟೆಗೆ ಹೊರ ಆವರಣದಲ್ಲಿ ಬಿಡುವು ನೀಡಲಾಗಿತ್ತು. ಆ ವೇಳೆ ಸ್ನೇಹಿತರಾಗಿದ್ದ ಸಿದ್ದಪ್ಪ ಹಾಗೂ ಖಾದರ್ ಇಬ್ಬರೂ ಮಾತನಾಡುತ್ತಾ ಕುಳಿತಿದ್ದರು. ನಂತರ 6 ಗಂಟೆಯೊಳಗೆ ಒಳಗೆ ಹೊರಡುವವ ವೇಳೆ ಇವರಿಬ್ಬರ ನಡುವೆ ಜಗಳ ಸಂಭವಿಸಿತು. ನಿನ್ನನ್ನು ನೋಡಲು ಯಾರೂ ಬರುವುದಿಲ್ಲ. ನಿನಗೆ ಜೈಲೇ ಗತಿ ಎಂದು ಸಿದ್ದಪ್ಪ ಹೇಳಿದ್ದಕ್ಕೆ ಕೋಪಕೊಂಡ ಖಾದರ್ ಪಕ್ಕದಲ್ಲೇ ಇದ್ದ ಕಲ್ಲು ತೆಗೆದುಕೊಂಡು ಸಿದ್ದಪ್ಪನ ತಲೆಗೆ ಹೊಡೆದಿದ್ದಾನೆ.

ಫ್ರೆಶ್ ನ್ಯೂಸ್

Latest Posts

Featured Videos