ಹುಬ್ಬಳ್ಳಿ, ಡಿ.26 : ಕ್ಷುಲ್ಲಕ ಕಾರಣಕ್ಕೆ ವಿಚಾರಣಾಧೀನ ಕೈದಿಗಳಿಬ್ಬರು ಕಲ್ಲಿನಿಂದ ಹೊಡೆದಾಡಿಕೊಂಡ ಘಟನೆ ಇಲ್ಲಿನ ವಿಶ್ವೇಶ್ವರನಗರದ ಉಪಕಾರಾಗೃಹದಲ್ಲಿ ನಿನ್ನೆ ಸಂಜೆ ನಡೆದಿದ್ದು, ಈ ಘಟನೆಯಲ್ಲಿ ಒಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.ರಾಯನಾಳ್ ಗ್ರಾಮದ ಸಿದ್ದಪ್ಪ ಗದಿಗೆಪ್ಪ ಕೋಳೂರು ಎಂಬುವನೇ ಗಾಯಗೊಂಡ ಕೈದಿಯಾಗಿದ್ದಾನೆ.ತಾಲ್ಲೂಕಿನ ದೊಡ್ಡಸಮುದ್ರ ಗ್ರಾಮದ ಖಾದರ್ಸಾಬ್ ಮಹಮ್ಮದ್ಸಾಬ್ಮುನಿಯಾರ್ (40) ಹಲ್ಲೆ ನಡೆಸಿದ ವಿಚಾರಣಾಧೀನ ಕೈದಿ.
ಘಟನೆ ವಿವರ: ನಿನ್ನೆ ಸಂಜೆ 5 ಗಂಟೆಗೆ ಹೊರ ಆವರಣದಲ್ಲಿ ಬಿಡುವು ನೀಡಲಾಗಿತ್ತು. ಆ ವೇಳೆ ಸ್ನೇಹಿತರಾಗಿದ್ದ ಸಿದ್ದಪ್ಪ ಹಾಗೂ ಖಾದರ್ ಇಬ್ಬರೂ ಮಾತನಾಡುತ್ತಾ ಕುಳಿತಿದ್ದರು. ನಂತರ 6 ಗಂಟೆಯೊಳಗೆ ಒಳಗೆ ಹೊರಡುವವ ವೇಳೆ ಇವರಿಬ್ಬರ ನಡುವೆ ಜಗಳ ಸಂಭವಿಸಿತು. ನಿನ್ನನ್ನು ನೋಡಲು ಯಾರೂ ಬರುವುದಿಲ್ಲ. ನಿನಗೆ ಜೈಲೇ ಗತಿ ಎಂದು ಸಿದ್ದಪ್ಪ ಹೇಳಿದ್ದಕ್ಕೆ ಕೋಪಕೊಂಡ ಖಾದರ್ ಪಕ್ಕದಲ್ಲೇ ಇದ್ದ ಕಲ್ಲು ತೆಗೆದುಕೊಂಡು ಸಿದ್ದಪ್ಪನ ತಲೆಗೆ ಹೊಡೆದಿದ್ದಾನೆ.