ಹಾಸನ, ಏ. 8, ನ್ಯೂಸ್ ಎಕ್ಸ್ ಪ್ರೆಸ್: ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣರನ್ನ ಮಣಿಸಲು ಏನೇನು ಮಾಡಬೇಕು ಅಂತಾ ಸ್ಥಳೀಯ ಬಿಜೆಪಿ ಶಾಸಕ ಪ್ರೀತಮ್ ಗೌಡ ಬಿಜೆಪಿ ಕಾರ್ಯಕರ್ತರಿಗೆ ಪಾಠ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣ ಸೋಲಿಸಿದರೆ ನಿಮಗೆಲ್ಲಾ ಗೌರವ ಬರುತ್ತೆ, ಈ ಚುನಾವಣೆಯಲ್ಲೂ ಅವರೇ ಗೆದ್ದರೆ ಕಥೆ ಮುಗೀತು. ಭಯ ಹುಟ್ಟಿಸಿದರೆ ಮಾತ್ರ ನಿಮಗೆ ಗೌರವ ಬರುತ್ತೆ ಅಂತ ಪ್ರೀತಮ್ ಗೌಡ ಪಾಠ ಮಾಡಿದ್ದಾರೆ.
ಈಗ ಬೂತ್ಗೆ 1 ಲಕ್ಷ ರೂ ಕೊಟ್ಟಿದ್ದಾರೆ. ಈಗ ಸೋತರೆ ಮುಂದಿನ ಚುನಾವಣೆಯಲ್ಲಿ ಬೂತ್ಗೆ 5 ಲಕ್ಷ ರೂ. ಕೊಡುತ್ತಾರೆ. ನಾವು ನಿಮಗೆ ಅನುಕೂಲ ಮಾಡುತ್ತಿದ್ದೀವಿ.
ಈಗಲೇ ಮೂರು ಕಾಸಿನ ಗೌರವ ಕೊಡಲ್ಲ, ಹೋಗೋ ಬಾರೋ ಅಂತಾ ಮಾತಾಡುತ್ತಾನೆ. ಆ ಹುಡುಗುನ ಹತ್ರ ಹೋಗಿ ಕೈಕಟ್ಟಿ ನಿಲ್ಲುತ್ತಿರಾ ಎಂದು ಪ್ರಜ್ವಲ್ ಹೆಸರು ಹೇಳದೇ ಕಾರ್ಯಕರ್ತರಿಗೆ ಕಿವಿಮಾತು ಹೇಳಿದ್ದಾರೆ.