ಬೆಂಗಳೂರು, ಮಾ.30, ನ್ಯೂಸ್ ಎಕ್ಸ್ ಪ್ರೆಸ್: ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಪ್ರಕಾಶ್ ರೈ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಬಳಿಕ ಚುನಾವಣಾ ಆಯೋಗ ಅವರ ನಾಮಪತ್ರ ಅಂಗೀಕರಿಸಿ ಇದೀಗ ಅವರಿಗೆ “ವಿಶಲ್” ಚಿಹ್ನೆ ನೀಡಿದೆ ಎಂದು ಸ್ವತಃ ಪ್ರಕಾಶ್ ರೈ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಕಾಶ್ ರೈ, ನಾವೆಲ್ಲರೂ ಕೂಡ ಭ್ರಷ್ಟಾಚಾರ, ಬೇಜವಾಬ್ದಾರಿ ರಾಜಕಾರಣಿಗಳ ವಿರುದ್ಧ ವಿಶಲ್ ಊದೋಣ ಎಂದು ಕರೆ ಕೊಟ್ಟಿದ್ದಾರೆ.
ಬೆಂಗಳೂರು ಸೆಂಟ್ರಲ್ ಕ್ಷೇತ್ರ ಈಗಾಗಲೇ ಪ್ರಕಾಶ್ ರೈ ಅವರ ಸ್ಪರ್ಧೆಯಿಂದ ಸುದ್ದಿ ಮಾಡಿದ್ದು, ಇವರ ವಿರುದ್ಧ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ರಿಜ್ವಾನ್ ಹರ್ಷದ್ ಕಣದಲ್ಲಿ ಇದ್ದಾರೆ.
Our symbol okayed by election commission is #whistle .. let us CITIZENS be the WHISTLE BLOWERS of these CORRUPT..LAZY..IRRESPONSIBLE. .. POLITICIANS ..let’s empower #citizensvoice in parliament.. #bengalurucentral pic.twitter.com/VRIKwLyvm0
— Prakash Raj (@prakashraaj) March 29, 2019