ಪ್ರಕಾಶ್​​​​​​ ರಾಜ್​​​ಗೆ ನಟಿ ಕಸ್ತೂರಿ ಟಾಂಗ್​: ಸಿಡಿದೆದ್ದ ಕನ್ನಡಿಗರು!

ಪ್ರಕಾಶ್​​​​​​ ರಾಜ್​​​ಗೆ ನಟಿ ಕಸ್ತೂರಿ ಟಾಂಗ್​: ಸಿಡಿದೆದ್ದ ಕನ್ನಡಿಗರು!

ಚೆನ್ನೈ, ಮೇ.8, ನ್ಯೂಸ್ ಎಕ್ಸ್ ಪ್ರೆಸ್: ಸದಾ ಏನಾದರೊಂದು ವಿವಾದಾತ್ಮಕ ಹೇಳಿಕೆ ನೀಡುವ ತಮಿಳು ನಟಿ ಕಸ್ತೂರಿ ಇದೀಗ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪ್ರಕಾಶ್ ರಾಜ್​ ದೆಹಲಿಯಲ್ಲಿ AAP ಚುನಾವಣಾ ಪ್ರಚಾರ ಸಭೆಯಲ್ಲಿ ದೆಹಲಿ ಶಿಕ್ಷಣ ವ್ಯವಸ್ಥೆ ಬಗ್ಗೆ ಮಾತನಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಕಸ್ತೂರಿ ಹೇಳಿಕೆಯೊಂದನ್ನು ನೀಡಿದ್ದಾರೆ. ಪ್ರಕಾಶ್ ರಾಜ್​​ ಇತ್ತೀಚೆಗೆ ಆಮ್ ಆದ್ಮಿ ಪಾರ್ಟಿ ಪರ ಚುನಾವಣಾ ಪ್ರಚಾರಕ್ಕಾಗಿ ದೆಹಲಿಗೆ ತೆರಳಿದ್ದರು. ಸಭೆಯೊಂದರಲ್ಲಿ ಪ್ರಕಾಶ್ ರಾಜ್ ದೆಹಲಿ ಶಿಕ್ಷಣ ವ್ಯವಸ್ಥೆ ಬಗ್ಗೆ ಮಾತನಾಡುವಾಗ ‘ತಮಿಳು ವಿದ್ಯಾರ್ಥಿಗಳು ದೆಹಲಿ ವಿದ್ಯಾರ್ಥಿಗಳ ಅವಕಾಶವನ್ನು ದೋಚುತ್ತಿದ್ದಾರೆ’ ಎಂದು ಹೇಳಿದ್ದರು. ಈ ಮಾತಿಗೆ ತಮಿಳಿಗರು ಕೋಪಗೊಂಡಿದ್ದರು. ಇನ್ನು ನೀವು ತಮಿಳಿಗರಾಗಿ ಅವರ ವಿರುದ್ಧವಾಗಿ ಏಕೆ ಮಾತನಾಡುತ್ತಿದ್ದೀರಿ ಎಂದು ವ್ಯಕ್ತಿಯೊಬ್ಬರು ಕೇಳಿದ್ದ ಪ್ರಶ್ನೆಗೆ. ನಾನು ಕನ್ನಡಿಗ, ತಮಿಳು ಸಿನಿಮಾದಲ್ಲಿ ನಟಿಸಿದ್ದೇನೆ ಅಷ್ಟೇ ಎಂದು ಹೇಳಿದ್ದರು. ಪ್ರಕಾಶ್ ರಾಜ್​ ಅವರ ಈ ಹೇಳಿಕೆಗೆ ಇತ್ತೀಚೆಗೆ ಸಿನಿಮಾ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ನಟಿ ಕಸ್ತೂರಿ ‘ತಮಿಳು ಜನರು ಪ್ರತಿಭಾವಂತರು, ಆದ ಕಾರಣ ಅವರು ಎಲ್ಲಿ ಹೋದರು ಗೌರವಿಸಲ್ಪಡುತ್ತಾರೆ. ತಮ್ಮ ಪ್ರತಿಭೆಯಿಂದಲೇ ಅವರು ಎಲ್ಲಾ ಕಡೆ ಗೆಲ್ಲುತ್ತಾರೆ ಹಾಗೂ ಎತ್ತರದ ಸ್ಥಾನಕ್ಕೆ ಏರುತ್ತಾರೆ. ಯಾವೊಬ್ಬ ವಿದ್ಯಾರ್ಥಿ/ವಿದ್ಯಾರ್ಥಿನಿ ತಮಿಳುನಾಡಿನ ಶಿಕ್ಷಣ ವ್ಯವಸ್ಥೆಯಲ್ಲಿ ಒಳ್ಳೆಯ ಅಂಕಗಳನ್ನು ಗಳಿಸಿದರೆ ಅವರು ಪ್ರಪಂಚದ ಯಾವ ಮೂಲೆಗೆ ಹೋದರೂ ಗೆಲ್ಲುತ್ತಾರೆ ಆದ ಕಾರಣ ಕನ್ನಡ ಜನರು ಸೇರಿ ಪ್ರತಿಯೊಬ್ಬರೂ ತಮಿಳಿಗರನ್ನು ನೋಡಿದರೆ ಹೆದರುತ್ತಾರೆ’ ಎಂದು ಪ್ರಕಾಶ್​ ರಾಜ್ ಕುರಿತು ಮಾತನಾಡಿದ್ದಾರೆ. ಆದರೆ ತಾನು ಯಾವುದೇ ಕಾರಣಕ್ಕೂ ತಮಿಳು ವಿದ್ಯಾರ್ಥಿಗಳ ವಿರುದ್ಧವಾಗಿ ಮಾತನಾಡಿಲ್ಲ. ದೆಹಲಿ ಶಿಕ್ಷಣ ವ್ಯವಸ್ಥೆ ಈಗ ಹೇಗಿದೆ ಎಂಬುದರ ಬಗ್ಗೆ ನಾನು ಮಾತನಾಡಿದ್ದೇನೆ ಎಂದು ಪ್ರಕಾಶ್ ರಾಜ್ ಸ್ಪಷ್ಟನೆ ನೀಡಿದ್ದಾರೆ. ಆದರೆ ಕಸ್ತೂರಿ ಹೇಳಿಕೆ ಕನ್ನಡಿಗರು ಕೆಂಡಾಮಂಡಲವಾಗಿದ್ದಾರೆ. ಶ್ರೀದೇವಿ ನಿಧನರಾದಾಗ ಕೂಡಾ ‘ಚಾನೆಲ್​​​ಗಳು ಹಾಗೂ ಎಫ್​​​ಎಂಗಳು ಈಗ ಶ್ರೀದೇವಿ ನಟಿಸಿರುವ ಸಿನಿಮಾಗಳು ಹಾಡುಗಳನ್ನು ಪ್ರಸಾರ ಮಾಡುತ್ತಿವೆ. ಒಂದು ವೇಳೆ ಸನ್ನಿ ಲಿಯೋನ್​​ಗೆ ಈ ರೀತಿ ಆದರೆ ಆಗಲೂ ಅವರು ನಟಿಸಿರುವ ಸಿನಿಮಾ ಹಾಡುಗಳನ್ನು ಪ್ರಸಾರ ಮಾಡುತ್ತವೆಯೇ ಎಂದು ಟ್ವಿಟರ್​​​​​ನಲ್ಲಿ ಪ್ರಶ್ನಿಸಿ ನೆಟ್ಟಿಗರ ಕೋಪಕ್ಕೆ ತುತ್ತಾಗಿದ್ದರು. ಅಂದಹಾಗೆ ಕಸ್ತೂರಿ ಜಾಣ, ತುತ್ತಾ ಮುತ್ತಾ, ಒನ್ ಮ್ಯಾನ್ ಆರ್ಮಿ, ಹಬ್ಬ, ಪ್ರೇಮಕ್ಕೆ ಸೈ ಹಾಗೂ ಇನ್ನಿತರ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos