ಮೈಸೂರು, ಏ. 24, ನ್ಯೂಸ್ ಎಕ್ಸ್ ಪ್ರೆಸ್: ತಮಿಳುನಾಡಿನ ಪೊನ್ಪರಪ್ಪಿ ಗ್ರಾಮಕ್ಕೆ ನುಗ್ಗಿ ದಲಿತರ ಮೇಲೆ ಮಾರಾಕಾಸ್ತ್ರಗಳಿಂದ ಅಮಾನುಷವಾಗಿ ಹಲ್ಲೆ ಮಾಡಿರುವ ಮೇಲ್ವರ್ಗದವರ ನಡೆ ಖಂಡಿಸಿ ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘ ಪ್ರತಿಭಟನೆ ನಡೆಸಿದೆ.
ಮಾನಸ ಗಂಗೋತ್ರಿಯ ಗಡಿಯಾರದ ಮುಂಭಾಗ ಜಮಾಯಿಸಿದ ನೂರಾರು ವಿದ್ಯಾರ್ಥಿಗಳು ಪೊನ್ಪರಪ್ಪಿ ಗ್ರಾಮದಲ್ಲಿ ದಲಿತರ ಮಕ್ಕಳು, ಮಹಿಳೆಯರು, ವೃದ್ಧರು ಎನ್ನುವುದನ್ನು ನೋಡದೆ ಮನಸೋ ಹಲ್ಲೆ ಮಾಡಲಾಗಿದೆ. ಈ ಘಟನೆಯ ಹಿಂದೆ ಇರುವ ಮೇಲ್ವರ್ಗದ ಜನರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.