ಸಿಎಂ ಹೆಚ್.ಡಿ.ಕೆ. ಕೊಲೆಗೆ ಸಂಚು: ಡಿ.ಕೆ.ಶಿವಕುಮಾರ್

ಸಿಎಂ ಹೆಚ್.ಡಿ.ಕೆ. ಕೊಲೆಗೆ ಸಂಚು: ಡಿ.ಕೆ.ಶಿವಕುಮಾರ್

ಶಿವಮೊಗ್ಗ, ಏ. 3, ನ್ಯೂಸ್ ಎಕ್ಸ್ ಪ್ರೆಸ್: ಸಿಎಂ ಕುಮಾರಸ್ವಾಮಿ ಅವರು ನೆಗೆದು ಬಿಳ್ತಾರೆ ಎಂದು ಹೇಳಿಕೆ ನೀಡಿದ್ದ ಕೆಎಸ್ ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಜಲ ಸಂಪನ್ಮೂಲ ಸಚಿವ ಡಿಕೆ ಕುಮಾರ್, ಇದರ ಹಿಂದೆ ಏನೋ ಒಂದು ಸಂಚು ಕಾಣಿಸುತ್ತಿದೆ. ಮುಖ್ಯಮಂತ್ರಿಗಳ ಕೊಲೆಗೆ ಸಂಚು ಇದು ಎಂದು ಹೇಳಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಶ್ವರಪ್ಪನ ಕೊಳಚೆ ನಾಲಿಗೆಗೆ ಯಡಿಯೂರಪ್ಪ ಅಂತ್ಯ ಹೇಳುತ್ತಾರೆ. ಅವರ ಈ ಹೇಳಿಕೆ ಮುಖ್ಯಮಂತ್ರಿ ಕೊಲೆಗೆ ಸಂಚು ಇದು. ‘ಹೌ ಕೆನ್ ಈ ಟೆಲ್ ದಟ್’ ಇದು ದೇಶದ ಅಥವಾ ಆರ್‍ಎಸ್‍ಎಸ್ ಸಂಸ್ಕೃತಿನಾ ಎಂದು ಪ್ರಶ್ನಿಸಿದ್ದಾರೆ. ಅವರ ಆಚಾರ- ವಿಚಾರ ನಾಲಿಗೆಯಿಂದ ಗೊತ್ತಾಗುತ್ತಿದೆ. ಒಂದು ಪಂಚಾಯ್ತಿ ಸದಸ್ಯ ಆಗಲು ಕೂಡ ಅವರಿಗೆ ಯೋಗ್ಯತೆ ಇಲ್ಲ. ಈಶ್ವರಪ್ಪ ನಾಲಿಗೆ ಬಗ್ಗೆ ಯಡಿಯೂರಪ್ಪ, ಸದಾನಂದಗೌಡ, ಸುರೇಶ್ ಕುಮಾರ್ ಯಾಕೆ ಮಾತನಾಡುತ್ತಿಲ್ಲ? ಇದೇನಾ ಬಿಜೆಪಿ ಸಂಸ್ಕೃತಿ. ಹೆಣದ ಮೇಲೆ ರಾಜಕಾರಣ, ಅಧಿಕಾರ ಮಾಡಬೇಕೇ? ಹುಟ್ಟಿದ ಮೇಲೆ ಎಲ್ಲರೂ ಸಾಯಲೇಬೇಕು. ಆತ ಸಂವಿಧಾನ ಓದಿಕೊಂಡಿರಾ? ಡಿಸಿಎಂ ಆಗಿರೋರು ಎಲ್ಲಾ ಧರ್ಮದವರನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕು. ಅವರು ಹಿಂದೂ ಅಂತಾರಾ, ನಾವೂ ಎಲ್ಲರೂ ಒಟ್ಟಿಗೆ ಕರೆದುಕೊಂಡು ಹೋಗುತ್ತೇವೆ ಎಂದರು. ಮಂಡ್ಯ ನಟರ ಪ್ರಚಾರದ ಬಗ್ಗೆ ಪ್ರತಿಕ್ರಿಯೆ ನೀಡಿ, ಹಾಸನ ಮತ್ತು ಮಂಡ್ಯ ಜನರು ಬುದ್ಧಿವಂತರಿದ್ದಾರೆ. ಉತ್ತಮ ನಿರ್ಧಾರ ಕೈಗೊಳ್ಳುತ್ತಾರೆ. ಮತ ಗಳಿಸಲು ಪ್ರಚಾರ ಮಾಡುವುದು ತಪ್ಪಲ್ಲ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos