ಒಡಿಶಾ, ಮೇ, 7. ನ್ಯೂಸ್ ಎಕ್ಸ್ ಪ್ರೆಸ್: ಒಡಿಶಾ ಸುತ್ತಮುತ್ತಲ ಪ್ರದೇಶದಲ್ಲಿ ‘ಫಣಿ’ ಚಂಡಮಾರುತಕ್ಕೆ ಸಾವಿರಾರು ಬೃಹತ್ ಮರಗಳು ಧರೆಗುರುಳಿದೆ. ಮನೆಗಳು ಕುಸಿದುಬಿದ್ದಿವೆ. ಅಲ್ಲಲ್ಲಿ ಟವರ್ ಗಳು ಕುಸಿದುಬಿದ್ದಿದ್ದು, ನೆಟ್ ವರ್ಕ್ ಕೂಡ ಸ್ಥಗಿತಗೊಂಡಿದೆ. ಇನ್ನು ಫಣಿ ಆರ್ಭಟಕ್ಕೆ ಇಲ್ಲಿಯವರೆಗೂ 20 ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ..
ಅಕ್ಷಯ್ ಕುಮಾರ್ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಕೋಟಿ ರೂ ದೇಣಿಗೆ ನೀಡಿದ್ದಾರೆ. ಸಾಮಾಜಿಕ ಸಮಸ್ಯೆಗಳು ಬಂದಾಗ ಯಾವಾಗಲೂ ಮುಂದೆ ಬಂದು ಸಹಾಯ ಮಾಡುವ ನಟರಲ್ಲಿಅಕ್ಷಯ್ ಕುಮಾರ್ ಕೂಡ ಒಬ್ಬರು. ಚೆನ್ನೈ ಪ್ರವಾಹದ ಸಂದರ್ಭದಲ್ಲೂ ಅಕ್ಷಯ್ ಕುಮಾರ್ ದೇಣಿಗೆ ನೀಡಿ ಜನರಿಗೆ ಸಹಾಯ ಮಾಡಿದ್ದರು.