ಓರ್ವ ಸ್ಥಳದಲ್ಲೇ ಸಾವು

ಓರ್ವ ಸ್ಥಳದಲ್ಲೇ ಸಾವು

ಚಿತ್ರದುರ್ಗ, ಡಿ. 11 : ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಚಿಕ್ಕಗೊಂಡನಹಳ್ಳಿ ಬಳಿ ಮೂರು ಲಾರಿಗಳು ನಡುವೆ ಸರಣಿ ಅಪಘಾತ ನಡೆದಿದೆ.
ಘಟನಯಲ್ಲಿ ಓರ್ವ ಲಾರಿ ಚಾಲಕ ಮೃತಪಟ್ಟಿದ್ದು ಏಳು ಜನ ಗಾಯ ಗೊಂಡಿದ್ದಾರೆ. ಮೃತ ಲಾರಿ ಚಾಲಕನ ಗುರುತು ಪತ್ತೆಯಾಗಿಲ್ಲ.
ಬೆಂಗಳೂರಿನಿಂದ ಹರಿಯಾಣ ಕಡೆಗೆ ಹಾಗೂ ಹೊಸಪೇಟೆಯಿಂದ ಬೆಂಗಳೂರು ಮಾರ್ಗವಾಗಿ ಲಾರಿಗಳು ತೆರಳುತ್ತಿದ್ದವು.
ಈರುಳ್ಳಿ ಸಾಗಿಸುತ್ತಿದ್ದ ಲಾರಿಯಲ್ಲಿದ್ದ ಏಳು ಮಂದಿ ಗಾಯಾಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ತುರುವನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos