ಮೈಸೂರು, ಮೇ.17, ನ್ಯೂಸ್ ಎಕ್ಸ್ ಪ್ರೆಸ್: ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ಸಮೀಪ ಬೀಚನಹಳ್ಳಿ ಗ್ರಾಮಕ್ಕೆ ಒಂಟಿ ಸಲಗ ನುಗ್ಗಿ ಆತಂಕ ಸೃಷ್ಟಿ ಮಾಡಿದೆ. ಒಂಟಿ ಸಲಗಕ್ಕೆ ಹೆದರಿ ಗ್ರಾಮಸ್ಥರು ಮನೆಯಿಂದ ಹೊರ ಬರುತ್ತಿಲ್ಲ. ಕಬಿನಿ ಹಾಗೂ ಜಲಾಶಯದ ಸಮೀಪ ಆನೆಗಳ ಹಿಂಡು ನೀರು ಕುಡಿದು ಹೋಗ್ತಿದ್ದವು. ಆದರೆ ಈವರೆಗೆ ಆನೆಗಳು ಗ್ರಾಮಕ್ಕೆ ನುಗ್ಗಿರಲಿಲ್ಲ. ಕೂಡ್ಲೇ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಆಗಮಿಸಿ ಗ್ರಾಮಸ್ಥರಿಗೆ ಸೂಕ್ತ ರಕ್ಷಣೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.