ಮೈಲಾರಲಿಂಗೇಶ್ವರ ಜಾತ್ರೆ: ಕಣ್ತುಂಬಿಕೊಳ್ಳಲು ಸಾಕಷ್ಟು ಭಕ್ತರು ಆಗಮನ

ಮೈಲಾರಲಿಂಗೇಶ್ವರ ಜಾತ್ರೆ: ಕಣ್ತುಂಬಿಕೊಳ್ಳಲು ಸಾಕಷ್ಟು ಭಕ್ತರು ಆಗಮನ

ದಾವಣಗೆರೆ: ಈಗಿನ ಕಾಲದಲ್ಲಿ ಜನರಿಗೆ ದೇವರ ಮೇಲೆ ಭಕ್ತಿ ಹಾಗೂ ನಂಬಿಕೆ ಎಲ್ಲಾ ಬಿಟ್ಟು ಹೋಗಿದೆ. ಆದರೆ ಈವೊಂದು ಜಿಲ್ಲೆಯಲ್ಲಿ ಜನರು ಈಗಲೂ ದೇವರ ಮೇಲೆ ಎಷ್ಟು ಬಯ ಭಕ್ತಿಯಿಂದ ದೇವರಿಗೆ ಪೂಜೆ ಮಾಡುತ್ತಾರೆ ಎಂದರೆ ನೋದಲು ಎರಡು ಕಣ್ಣು ಸಾಲದು.

ಜಿಲ್ಲೆಯ ಹರಿಹರ ತಾಲೂಕಿನ ದೇವರಬೆಳಕೆರೆ ಗ್ರಾಮದ ಅದ್ಧೂರಿಯಾಗಿ ಮೈಲಾರಲಿಂಗೇಶ್ವರ ಜಾತ್ರೆ ನೆರವೇರಿತು. ದೇವಲೋಕದ ಕಾರುಣ್ಯ ಪುರುಷ ಮೈಲಾರಲಿಂಗೇಶ್ವರ ಇಲ್ಲಿ ಉದ್ಭವಿಸಿದ್ದರಿಂದ ಈ ಪುಣ್ಯ ಕ್ಷೇತ್ರದಲ್ಲಿ ಹಲವು ಪವಾಡಗಳು ನಡೆಯುತ್ತವೆ. ಪವಾಡ ಪುರುಷ ಮೈಲಾರಲಿಂಗೇಶ್ವರ ನೆಲೆಸಿದ್ದರಿಂದ ಈ ಗ್ರಾಮಕ್ಕೆ ದೇವರಬೆಳಕೆರೆ ಎಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ. ಪ್ರತಿ ವರ್ಷ ಭರತ ಹುಣ್ಣಿಮೆ ನಂತರ ಹಾಗೂ ಮೈಲಾರದ ಜಾತ್ರೆಯ ಕಾರ್ಣಿಕ ಹೇಳಿದ ಬಳಿಕ ಎರಡನೇ ಮೈಲಾರ ಎಂದೇ ಖ್ಯಾತಿ ಗಳಿಸಿರುವ ದೇವರಬೆಳಕೆರೆಯ ಮೈಲಾರಲಿಂಗೇಶ್ವರನ ದೇವಸ್ಥಾನದಲ್ಲಿ ಮೂರು ದಿನಗಳ ಕಾಲ ಜಾತ್ರೆ ನಡೆಯುತ್ತದೆ.

ಎರಡನೇ ದಿನದ ಜಾತ್ರೆಯಲ್ಲಿ ನಡೆಯುವ ಶಸ್ತ್ರ ಪವಾಡವನ್ನು ನೋಡಲು ಸುತ್ತಮುತ್ತಲಿನ ಊರುಗಳಿಂದ ಮತ್ತು ರಾಜ್ಯದ ಸಾವಿರಾರು ಜನರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. 11 ದಿನಗಳವರೆಗೆ ಉಪವಾಸ ಇರುವ ಗೊರವಯ್ಯ ಜಾತ್ರೆಯಲ್ಲಿ ಹಲವು ಪವಾಡಗಳನ್ನು ಮಾಡುತ್ತಾರೆ. ಹಿಂದಿನ ಕಾಲದಲ್ಲಿ ಗೊರವಯ್ಯನವರ ಪೂರ್ವಜರು ಶಿರವನ್ನು ಕತ್ತರಿಸಿ, ಬಾಳೆ ಎಲೆ ಮೇಲೆ ಇಟ್ಟು ದೇವರಿಗೆ ಪೂಜೆ ನೆರವೇರಿಸುವ ಮೂಲಕ ಪವಾಡ ಮಾಡುತ್ತಿದ್ದರಂತೆ. ಇದೀಗ ಕೈ ಮತ್ತು ಕಾಲುಗಳಿಗೆ ಶಸ್ತ್ರ ಚುಚ್ಚಿಕೊಳ್ಳುವ ಮೂಲಕ ಮೈಲಾರ ಜಾತ್ರೆಯಲ್ಲಿ ಪವಾಡ ಮಾಡುತ್ತಿದ್ದರು. ಆದರೆ, ಈ ಬಾರಿ ಕಾರಣಾಂತರಗಳಿಂದ ಶಸ್ತ್ರ ಪವಾಡ ನೆರವೇರಿಸದೆ ಇರುವುದಕ್ಕೆ ಭಕ್ತರು ಬೇಸರ ವ್ಯಕ್ತಪಡಿಸಿದರು.

ಮೂರು ದಿನಗಳವರೆಗೆ ಜರುಗುವ ಈ ಮೈಲಾರಲಿಂಗೇಶ್ವರ ಜಾತ್ರೆಗೆ ಹಲವಾರು ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಮೊದಲ ದಿನ ರಥೋತ್ಸವ ನಡೆಯುತ್ತದೆ. ಎರಡನೇ ದಿನ ಗೊರವಯ್ಯರ ಶಸ್ತ್ರ ಪವಾಡ ಇರುತ್ತದೆ. ಈ ಜಾತ್ರೆಗೆ ಆಗಮಿಸಿ ಯಾವುದೇ ಹರಕೆ ಹೊತ್ತರೂ ಮರುಜಾತ್ರೆಯ ವೇಳೆಗೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.

ಮೈಲಾರಲಿಂಗೇಶ್ವರ ಸೇವಾ ಟ್ರಸ್ಟ್​ನ ಅಧ್ಯಕ್ಷ ರುದ್ರಪ್ಪ ಪ್ರತಿಕ್ರಿಯಿಸಿ, “ಗೊರವಯ್ಯನವರ ಸಂಸಾರದಲ್ಲಿ 12 ವರ್ಷದ ಒಲೆ ಬಂದಿದ್ದರಿಂದ ಈ ಬಾರಿ ಶಸ್ತ್ರ ಪವಾಡ ಮಾಡಲಾಗಲಿಲ್ಲ. ಕಾಲಿಗೆ ಕೈಗೆ ಚುಚ್ಚಿಕೊಳ್ಳುವ ಶಸ್ತ್ರ ಪವಾಡ ನೆರವೇರಿಸಿಲ್ಲ. ಗೊರವಯ್ಯನಿಂದ ಸರಪಳಿ ತುಂಡರಿಸುವ ಪವಾಡ ನಡೆದಿದೆ. ಇದನ್ನು ಕಣ್ತುಂಬಿಕೊಳ್ಳಲು ಸಾಕಷ್ಟು ಭಕ್ತರು ಆಗಮಿಸಿದ್ದಾರೆ” ಎಂದರು.

ಫ್ರೆಶ್ ನ್ಯೂಸ್

Latest Posts

Featured Videos