ಆನೇಕಲ್, ಆ. 8: ನಗರದ ರಾಜಾಪುರದಲ್ಲಿ ನೆನ್ನೆ ಮುಂಜಾನೆ ಅಪರಿಚಿತ ಶವ ಪತ್ತೆಯಾಗಿದ್ದು, ಕೊಲೆ ಮಾಡಿರುವ ಶಂಕೆ ಮುಡಿದೆ. ಜಿಗಣಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಜಾಪುರ ನೆನ್ನೆ ಮುಂಜಾನೆ ನಡೆದಿದ್ದ ಘಟನೆ, ತಡವಾಗಿ ಬೆಳಕಿಗೆ. ದಾವಣಗೆರೆ ಮೂಲದ ಗೋಪಿ ಮೃತ ದುರ್ದೈವಿ. ಗೋಪಿ ಮತ್ತು ವಿನಯ್ಕುಮಾರ್ ಇಬ್ಬರು ಸ್ನೇಹಿತರು ನೆನ್ನೆ ಇಬ್ಬರೂ ಜೊತೆಯಾಗಿ ಪ್ರಯಾಣ ಬೆಳೆಸಿದ್ದರು ಹೀಗಾಗಿ ಸಂಶಯದ ಮೇಲೆ ಜೊತೆಗಿದ್ದ ಸ್ನೇಹಿತ ವಿನಯ್ ಕುಮಾರ್ ನನ್ನ ವಶಕ್ಕೆ ಪಡೆದ ಪೊಲೀಸರು. ಈ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ