ಮೋದಿ ವಿರುದ್ದ ನವಜ್ಯೋತ್ ಸಿಂಗ್ ಗರಂ

ಮೋದಿ ವಿರುದ್ದ ನವಜ್ಯೋತ್ ಸಿಂಗ್ ಗರಂ

ಮುಂಬೈ, . 27, ನ್ಯೂಸ್ ಎಕ್ಸ್ ಪ್ರೆಸ್: ಈ ಚುನಾವಣೆಯಲ್ಲಿ ಮತದಾರರು, ಸಿಕ್ಸರ್ ಬಾರಿಸುವ ಮೂಲಕ ಮೋದಿ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕ್ರಿಕೆಟರ್ ನವಜ್ಯೋತ್ ಸಿಂಗ್ ಕರೆ ನೀಡಿದ್ದಾರೆ. ನರೇಂದ್ರ ಮೋದಿ ಸರ್ಕಾರ ಬೆರಳೆಣಿಕೆಯ ಶ್ರೀಮಂತರ ಪರವಾಗಿ ಮಾತ್ರ ಕೆಲಸ ಮಾಡುತ್ತಿದೆ. ದಕ್ಷಿಣ ಮುಂಬೈನಲ್ಲಿ ಪಕ್ಷದ ಅಭ್ಯರ್ಥಿ ಮಿಲಿಂದ್ ದೇವೂರ ಪರ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ನವಜ್ಯೋತ್ ಸಿಂಗ್ ಸಿಧು, ದೇಶದ ಜಿಡಿಪಿ ಪ್ರಗತಿ ಚೀನಾಕ್ಕಿಂತ ಅಧಿಕ ಇದ್ದರೂ, ಉದ್ಯೋಗ ಸೃಷ್ಟಿಯಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂದು ಆಪಾದಿಸಿದರು.

ಮೋದಿಜೀ ನೀವು ಕೇವಲ ಶ್ರೀಮಂತರ ಪ್ರಧಾನಿ. ನೀವು ಬಡ ನಾಗರಿಕರ ಪ್ರಧಾನಿಯಲ್ಲ; ದೇಶದ ಬಡವರು ಮತ್ತು ರೈತರ ಜತೆ ನೀವೆಂದೂ ಕಾಣಿಸಿಕೊಂಡಿಲ್ಲ. ಏಕೆಂದರೆ ನೀವು ಅಂಬಾನಿ ಮತ್ತು ಅದಾನಿಯಂಥವರ ಚೌಕಿದಾರಿ ಮಾಡುವಲ್ಲೇ ನಿರತರಾಗಿದ್ದಿರಿ” ಎಂದು ಸಿಧು ಕುಟುಕಿದರು.

 

 

ಫ್ರೆಶ್ ನ್ಯೂಸ್

Latest Posts

Featured Videos