ಬೆಂಗಳೂರು, ಆ.20 : ಕೊನೆಗೂ ಬಿಎಸ್ ಯಡಿಯೂರಪ್ಪ ಸಂಪುಟ ರಚನೆ ಮಾಡಿದ್ದು 17 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಚಿವ ಸ್ಥಾನ ಕೈ ತಪ್ಪಿರುವ ಹಿನ್ನಲೆ ಹೊಸದುರ್ಗ ಕ್ಷೇತ್ರದ ಶಾಸಕ ಗೂಳಿ ಹಟ್ಟಿ ಶೇಖರ ಬಿಜೆಪಿ ವಿರುದ್ಧ ಫುಲ್ ಗರಂಆಗಿದ್ದಾರೆ.
2008ರಲ್ಲಿ ನನಗೆ ಖಾತೆ ಸಿಕ್ಕಿತ್ತು. ಆದರೆ ಬಾರಿ ನನಗೆ ಸಚಿವ ಸ್ಥಾನ ಸಿಕ್ಕಿಲ್ಲ. ನಾನ ಬಿಜೆಪಗೆ ಬಂದಿದ್ದೇ ತಪ್ಪು ಎಂದು ಬೇಸರ ವ್ಯಕ್ತಪಡಿಸಿದರು. ‘’ ನಾನು ಎಲ್ಲಾ ರೀತಿಯ ನೋವವನ್ನು ಅನುಭವಿಸಿದ್ದೇನೆ. ನಾನು ಬಿಜೆಪಿಗೆ ಹೋಗಿ ತಪ್ಪು ಮಾಡಿದ್ದೇನೆ ಎಂದರು.