ನಾಪತ್ತೆಯಾಗಿದ್ದ ಮಕ್ಕಳು ಮುಂಬೈನಲ್ಲಿ ಪತ್ತೆ

ನಾಪತ್ತೆಯಾಗಿದ್ದ ಮಕ್ಕಳು ಮುಂಬೈನಲ್ಲಿ ಪತ್ತೆ

ಕಲಬುರಗಿ, ಅ. 31 : ಜಿಲ್ಲೆಯ ಸೇಡಂ ತಾಲೂಕಿನ ಕೊತ್ತಪಲ್ಲಿ ತಾಂಡಾದಿಂದ ನಾಪತ್ತೆಯಾಗಿದ್ದ 5 ಜನ ಶಾಲಾ ಮಕ್ಕಳು ಮುಂಬೈನಲ್ಲಿ ಪತ್ತೆಯಾಗಿದ್ದಾರೆ.
ಹೋಟೆಲ್ವೊಂದರಲ್ಲಿ ಕೆಲಸ ಕೇಳಲು ತೆರಳಿದಾಗ ಅನುಮಾನಗೊಂಡ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಮುಧೋಳ ಗ್ರಾಮದ ಸರಕಾರಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಅಂಕುಶ ಗಣೇಶ ಜಾಧವ (14), ಜೇತಲಾ ಚಂದಾ ರಾಠೋಡ (14), ಜೀತು ಬನ್ಸಿಲಾಲಾ ರಾಠೋಡ (16), ಅರ್ಜುನ ಬಾಡು ರಾಠೋಡ (14), ರವೀಂದ್ರ ಹಣಮಂತ ರಾಠೋಡ (14) ಮಂಗಳವಾರ ನಾಪತ್ತೆಯಾಗಿದ್ದರು.
ಪಿಐ ತಮ್ಮಾರಾಯ ಪಾಟೀಲ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ ಬೆಂಗಳೂರು ಮತ್ತು ಮುಂಬೈನಲ್ಲಿ ನಾಪತ್ತೆಯಾದ ಮಕ್ಕಳಿಗಾಗಿ ಕಾರ್ಯಾಚರಣೆ ನಡೆಸಲಾಗಿತ್ತು. ನಾಪತ್ತೆಯಾದ ಮಕ್ಕಳು ಕೊನೆಗೂ ಮುಂಬೈನಲ್ಲಿ ಪತ್ತೆಯಾಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos