ಬೆಂಗಳೂರು, ಸೆ. 5: ನಾಗೇಶ್ ಅವರ ʼಮದ್ಯ ಪೂರೈಕೆʼ ಹೇಳಿಕೆಗೆ ರಾಜ್ಯಾದಾಧ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಮನೆಗಳಿಗೆ ಮದ್ಯ ಪೊರೈಕೆ ಮಾಡಿದರೆ ಸಂಸಾರಗಳು ಹಾಳಾಗುತ್ತವೆ. ಅದಕ್ಕೆ ನಾನು ಬಿಡುವುದಿಲ್ಲ. ಅಂತಹ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಅಬಕಾರಿ ಸಚಿವರು ಇಂದು ಸ್ಪಷ್ಟನೆ ನೀಡಿದರು.
ನನ್ನ ಹೇಳಿಕೆಯಿಂದ ಹೆಣ್ಣು ಮಕ್ಕಳಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದ ಸಚಿವರು, ತಾಂಡಗಳಲ್ಲಿ ಮೊಬೈಲ್ ಕ್ಯಾಂಟೀನ್ ಮೂಲಕ ಮದ್ಯ ಪೂರೈಕೆ ಪ್ರಸ್ತಾವನೆಯೂ ಇಲ್ಲ ಎಂದರು.