ಲಾರಿ ಡಿಕ್ಕಿ : ವ್ಯಕ್ತಿ ಸಾವು

ಲಾರಿ ಡಿಕ್ಕಿ : ವ್ಯಕ್ತಿ ಸಾವು

ತುಮಕೂರು, ಡಿ. 21 : ಹಾಲು ಹಾಕಲು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಧುಗಿರಿ ತಾಲೂಕಿನ ಕೆರೆಗಳಪಾಳ್ಯದ ಬಳಿ ಸಂಭವಿಸಿದೆ. ನವೀನ್(30) ಮೃತ ಪಟ್ಟ ದುರ್ದೈವಿ.
ತಮ್ಮ ಆಕ್ಟೀವಾ ಹೊಂಡಾದಲ್ಲಿ ಹಾಲ್ ಕ್ಯಾನ್ನೊಂದಿಗೆ ಗ್ರಾಮದಲ್ಲಿರುವ ಡೇರಿಗೆ ಹಾಕಲು ತೆರಳುತ್ತಿದ್ದಾಗ ತುಮಕೂರು ರಸ್ತೆಯಲ್ಲಿ ಮಧುಗಿರಿ ಕಡೆಯಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ.

ಫ್ರೆಶ್ ನ್ಯೂಸ್

Latest Posts

Featured Videos