ಶಿರಾ: ಮೂರು ಸಾವಿರ ಮನೆಗಳಿಗೆ ಏಂಟುವರೆ ಕೋಟಿ ಹಣ ಬಿಡುಗಡೆಯಾಗಬೇಕಿದೆ ಮನೆ ಮಂಜೂರಾತಿ ಫಲನುಭವಿಗಳಿಗೆ ಹಣ ನೀಡಲಾಗದೆ ಬಿಜೆಪಿ ಪಕ್ಷ ಹೊಸ ಮನೆಗಳ ಪಟ್ಟಿ ಮಾಡುತ್ತಿರುವುದು ಚುನಾವಣೆ ಗಿಮಿಕ್ ಎಂದು ಮಾಜಿ ಸಚಿವ ಟಿಬಿ ಜಯಚಂದ್ರ ಹೇಳಿದರು.
ಶಿರಾ ತಾಲ್ಲೂಕಿನ ಬರಗೂರು ಗ್ರಾಮ ಪಂಚಾಯಿತಿ ಮಟ್ಟದ ಕಾಂಗೆಸ್ ಪಕ್ಷದ ಕಾರ್ಯಕರ್ತರ ಬೂತ್ ಮಟ್ಟದ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಸರ್ಕಾರದ ಎರಡುವರೆ ವರ್ಷದ ಅವಧಿಯಲ್ಲಿ ೩೦೩ ಮನೆಗಳು ಮಂಜೂರಾಗಿದೆ, ದೇವಸ್ಥಾನದ ಅಭಿವೃದ್ದಿ ಕಾರ್ಯಗಳಿಗೆ ೨೧ ಕೋಟಿಗೂ ಹೆಚ್ಚು ಹಣ ನನ್ನ ಅಧಿಕಾರದ ಅವಧಿಯಲ್ಲಿ ಹಾಗೂ ಸಮಾರು ೨೩ ಸಮುದಾಯ ಭವನಗಳನ್ನು ನೀಡಿದ್ದೆ ಎಂದರು.
ಕಳೆದ ೯ ತಿಂಗಳಿನಿಂದಲೂ ಬಡವರಿಗೆ ಬರಬೇಕಿರುವ ಪಿಂಚಾಣಿ ಹಣ ಸಂದಾಯವಾಗುತ್ತಿಲ್ಲ ಪಿಂಚಾಣಿ ಫಲನುಭವಿಗಳು ವೃದ್ದರು ಹಣ ಬರುವಿಕೆಯನ್ನು ಕಾಯುವಂತಾಗಿದೆ, ಬಿಜೆಪಿ ಮುಖಂಡರು ಶಿರಾ ಕ್ಷೇತ್ರಕ್ಕೆ ೧ ಸಾವಿರ ಕೋಟಿ ನೀಡುತ್ತೇವೆ ಎನ್ನುತ್ತಾರೆ, ೧ ಸಾವಿರ ಎಕರೆಯಲ್ಲಿ ಕೈಗಾರಿಕೆ ಪ್ರಾರಂಭವಾಗಿದೆ. ಸಾವಿರಾರು ಹುದ್ದೆಗಳು ಶಿರಾ ಭಾಗದ ಯುವಕರಿಗೆ ಸಿಗಲಿದ್ದು ಆರ್ಥಿಕ ಚಟುವಟಿಕೆಗಳಿಂದ ಜನತೆ ನೆಮ್ಮದಿಯ ಬದುಕನ್ನು ನಡೆಸಲು ಸಾಧ್ಯ ಎಂದು ಹೇಳಿದರು.