ನಟಿ ಖುಷ್ಬೂಯಿಂದ ಯುವಕನಿಗೆ ಕಪಾಳ ಮೋಕ್ಷ

ನಟಿ ಖುಷ್ಬೂಯಿಂದ ಯುವಕನಿಗೆ ಕಪಾಳ ಮೋಕ್ಷ

ಬೆಂಗಳೂರು, ಏ. 11, ನ್ಯೂಸ್ ಎಕ್ಸ್ ಪ್ರೆಸ್: ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರವಾಗಿ ಸ್ಟಾರ್ ಪ್ರಚಾರಕ್ಕೆ ಇಳಿ ದನಟಿ ಖುಷ್ಪೂ ಅವರು ಅನುಚಿತವಾಗಿ ವರ್ತಿಸಿದ ಯುವಕನ ಕೆನ್ನೆಗೆ ಬಾರಿಸಿದ ಘಟನೆ ನಡೆಸಿದೆ.

ರಿಜ್ವಾನ್ ಅರ್ಷದ್ ಜೊತೆಗೆ ಪ್ರಚಾರಕ್ಕೆ ಇಳಿದ ಕೆ.ಜೆ.ಜಾರ್ಜ್ ಜೊತೆಗೆ, ನಟಿ ಖುಷ್ಬೂ ಕೂಡ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದರು. ಬೆಳಿಗ್ಗೆಯಿಂದ ಸಂಜೆಯ ವರೆಗೆ ತೆರೆದ ವಾಹನದಲ್ಲಿ ಪ್ರಚಾರ ಕಾರ್ಯಕ್ಕೆ ಇಳಿದ ನಟಿ ಖುಷ್ಬೂ, ರಾತ್ರಿ ಕಾಲ್ ನಡಿಗೆಯ ಮೂಲಕ ರಿಜ್ವಾನ್ ಹರ್ಷದ್ ಪರ ಮತಯಾಚನೆ ಮಾಡಿದರು.

ಈ ವೇಳೆ ನಟಿ ಖುಷ್ಬೂ ಜೊತೆಗೆ ಯುವಕನೋರ್ವ ಅನುಚಿತವಾಗಿ ವರ್ತಿಸಿದ ಕಾರಣ, ಸಿಟ್ಟಿನಿಂದಲೇ ಯುವಕನತ್ತ ತಿರುಗಿದ ಖುಷ್ಬೂ, ಯುವಕನ ಕೆನ್ನೆಗೆ ಬಾರಿಸಿಯೇ ಬಿಟ್ಟರು.

ನೆರೆದಿದ್ದ ಕಾರ್ಯಕರ್ತರು ಸೇರಿದಂತೆ ಅನೇಕರು ಏನ್ ಆಗುತ್ತದೆ ಎಂದು ನೋಡುವ ಮೊದಲೇ, ಒಂದೆರಡು ಏಟು ಯುವಕನಿಗೆ ಬಾರಿಸಿಯೇ ಬಿಟ್ಟಿದ್ದರು.

ಇನ್ನೂ ಉಳಿದಂತೆ ನೆರೆದಿದ್ದ ಕಾರ್ಯಕರ್ತರು, ಖುಷ್ಬೂವನ್ನು ಸಮಾಧಾನಿಸಿದ್ದಲ್ಲದೇ, ಅನುಚಿತವಾಗಿ ವರ್ತಿಸಿದ ಯುವಕನನ್ನು ಹಿಡಿದು, ಪೊಲೀಸರಿಗೆ ಒಪ್ಪಿಸಿದರು.

ಈ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ಕೇಂದ್ರ ಮೈತ್ರಿ ಅಭ್ಯರ್ಥಿ ರಿಜ್ವಾನ್ ಅರ್ಷದ್, ಅಸಭ್ಯವಾಗಿ ವರ್ತನೆ ತೋರಿದ ಯುವಕನಿಗೆ ಖುಷ್ಬೂ ಹೊಡೆದಿದ್ದಾರೆ. ಈ ಬಗ್ಗೆ ನಾನು ಪೊಲೀಸರ ಜೊತೆಗೆ ಮಾತನಾಡಿದ್ದೇನೆ. ಯಾರೇ ಈ ರೀತಿ ಮಾಡಿದ್ದರೂ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಅದೂ ನಮ್ಮ ಪಕ್ಷದ ಕಾರ್ಯಕರ್ತನಾದರೂ ಸರಿಯೇ. ಹೀಗೆ ಮಾಡುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos