ಚಿತ್ರದುರ್ಗ, 18.ಆ: ಕ್ರೂಸರ್ ಹಾಗು ಇಂಡಿಕಾ ಕಾರಿನ ನಡುವೆ ಡಿಕ್ಕಿಯಾಗಿ ಕಾರು ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಚಳ್ಳಕೆರೆ ತಾಲ್ಲೂಕು ಸಾಣಿಕೆರೆ ಗ್ರಾಮದ ಸಾಯಿ ಡಾಬಾ ಬಳಿ ರಾಷ್ಟ್ರೀಯ ಹೆದ್ದಾರಿ 150 ರಲ್ಲಿ ತಡರಾತ್ರಿ ನಡೆದಿದೆ.
ಮೃತ ಕಾರು ಚಾಲಕನನ್ನು ಲಿಂಗಸೂರು ತಾಲೂಕು ನರಕಲದಿಮ್ಮಿ ಗ್ರಾಮದ ಹನುಮಂತಪ್ಪ (29) ಎಂದು ಗುರುತಿಸಲಾಗಿದೆ.ಹಿರಿಯೂರು ಕಡೆಯಿಂದ ಲಿಂಗಸೂರು ಕಡೆಗೆ ಹೋಗುತ್ತಿದ್ದ ಕಾರು ಮತ್ತು ದೇವದುರ್ಗದಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಕ್ರೂಸರ್ ನಡುವೆ ಡಿಕ್ಕಿಯಾಗಿದೆ.ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದು, ಚಳ್ಳಕೆರೆ ಆಸ್ಪತ್ರೆಗೆ ದಾಖಲಾಗಿದ್ದಾರೆ.ಚಳ್ಳಕೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.