ಬೆಂಗಳೂರು, ಮೇ. 15, ನ್ಯೂಸ್ ಎಕ್ಸ್ ಪ್ರೆಸ್: ಬಡಾ ವ್ಯಾಪಾರಿಯೊಬ್ಬರು ಬೆಂಗಳೂರಿನ ಕೆಆರ್ ಮಾರುಕಟ್ ನಲ್ಲಿ ಹೆಗೋ ತನ್ನ ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂದು ಜೀವನ ನದೆಸುತ್ತಿದ್ದ. ಕೆಆರ್ ಮಾರುಕಟ್ ನಲ್ಲಿ ಕೇವಲ 4 ಅಡಿ ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಾಪಾರಿಯೊಬ್ಬರನ್ನು ಹತ್ಯೆ ಮಾಡಲಾಗಿದೆ.
ಭರತ್ ಹತ್ಯೆಯಾದ ವ್ಯಾಪಾರಿ ಎಂದು ಹೇಳಲಾಗಿದೆ. ಭರತ್ ಕುಟುಂಬ 40 ವರ್ಷಗಳಿಂದ ಮಾರುಕಟ್ಟೆಯಲ್ಲಿ ನಿಂಬೆಹಣ್ಣು ವ್ಯಾಪಾರ ಮಾಡುತ್ತಿದ್ದು, ಫುಟ್ ಪಾತ್ ಮೇಲೆ ನಿಂಬೆ ಹಣ್ಣಿನ ಅಂಗಡಿ ಹಾಕುವ 4 ಅಡಿ ಜಾಗದ ವಿಚಾರಕ್ಕೆ ಜಗಳವಾಗಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ.
ರೌಡಿಶೀಟರ್ ಸಹಚರರಿಂದ ಜಾಗದ ವಿಚಾರಕ್ಕಾಗಿ ದಿನ ಜಗಳ ನಡೆಯುತ್ತಿದ್ದು, 4 ಅಡಿ ಜಾಗಕ್ಕೆ ದಿನಕ್ಕೆ 500 ರೂ. ಕೊಡಬೇಕೆಂದು ಕಿರುಕುಳ ನೀಡುತ್ತಿದ್ದರು. ಮಾರ್ಕೆಟ್ ನ ಸಣ್ಣಪುಟ್ಟ ವ್ಯಾಪಾರಿಗಳ ಬಳಿಯೂ ಹಣ ವಸೂಲಿ ಮಾಡುತ್ತಿದ್ದರು. ಇದೇ ವಿಚಾರಕ್ಕೆ ಹತ್ಯೆಯಾಗಿದೆ ಎನ್ನಲಾಗಿದ್ದು, ಕೆ.ಆರ್. ಮಾರ್ಕೆಟ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮಕೈಗೊಂಡಿದ್ದಾರೆ.