ಬೆಂಗಳೂರು, ಜೂ. 20: ಬೆಂಗಳೂರು ನಗರದಲ್ಲಿ ಹಾಡುಹಗಲೇ ಕಳ್ಳಚತನ, ಕೊಲೆ, ಸುಲುಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೌದು,
ಕಾರಿನ ಮಾಲಿಕ ಕಾರು ನಿಲ್ಲಿಸಿ ಊಟ ಮಾಡಲೆಂದು ಹೋಟಲ್ ಗೆ ಹೋಗಿ ವಾಪಾಸ್ ಬರುವಷ್ಟರಲ್ಲಿ ಕಾರಿನ ಗಾಜು ಒಡೆದು ಕಾರಿನಲ್ಲಿದ್ದ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಅತ್ತಿಬೆಲೆಯಲ್ಲಿ ನಡೆದಿದೆ.
ಕಳ್ಳರ ಕೈಚಳಕದಿಂದ ಕಾರಿನಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ. ಹಾಡುಹಗಲೇ ಕಾರಿನ ಗಾಜು ಒಡೆದು ಚಿನ್ನಾಭರಣ ಕದ್ದ ಕಳ್ಳರು.
ಕಾರಿನ ಗಾಜಿಗೆ ಕ್ಯಾಟರ್ ಬಿಲ್’ನಿಂದ ಕಲ್ಲು ಹೊಡೆದು ಗಾಜು ಪುಡಿಪುಡಿ ಮಾಡಿ ಕಳ್ಳತನ, ಹೋಟೆಲ್ ನಲ್ಲಿ ಊಟಕ್ಕೆ ತೆರಳಿ ವಾಪಸ್ ಬರೋವಷ್ಟರಲ್ಲಿ ಕಳ್ಳತನ
ಬ್ಯಾಗ್’ನಲ್ಲಿದ್ದ ಸುಮಾರು 120 ಗ್ರಾಮ್ ಚಿನಭಾರಣ ಸೀರೆ ಹೊತ್ತೊಯ್ದ ಕಳ್ಳರು. ಅತ್ತಿಬೆಲೆಯ ಶ್ರೀನಿವಾಸ್ ಎಂಬುವವರಿಗೆ ಸೇರಿದ್ದ ಕಾರು.
ಯಾವುದೋ ಕಾರ್ಯಕ್ರಮ ಮುಗಿಸಿ ಮನೆಗೆ ಹೋಗುವ ಸಂದರ್ಭದಲ್ಲಿ ಹೋಟೆಲ್’ನಲ್ಲಿ ಊಟಕ್ಕೆಂದು ತೆರಳಿದ್ದಾಗ ಈ ಘಟನೆ ನಡೆದಿದೆ.
ಕಳ್ಳತನ ಮಾಡುವ ದೃಶ್ಯ ಹೋಟೆಲ್ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಈ ಪ್ರಕರಣ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದಾಖಲು.