ಕಲಬುರಗಿ , ಆ. 15 : ಜಿಲ್ಲಾಧಿಕಾರಿ ಆರ್ ವೆಂಕಟೇಶ್ವರ ಕುಮಾರ ಅವರು ದೇಶದ 73ನೇ ಸ್ವಾಸ್ವಾತಂತ್ರ್ಯೋತ್ಸವದ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು, ಭೀಮಾ ಪ್ರವಾಹದಿಂದ ಕಲಬುರಗಿ ಜಿಲ್ಲೆಯಲ್ಲಿ ನದಿ ಅಕ್ಕಪಕ್ಕದ ಮೂರು ಸಾವಿರ ಹೆಕ್ಟೇರ್ ಭೂಮಿಯ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಆರ್ ವೆಂಕಟೇಶಕುಮಾರ ಹೇಳಿದರು. ಈ ಮೂರು ಸಾವಿರ ಹೆಕ್ಟೇರ್ ಭೂಮಿಗೆ ಕೇಂದ್ರದ 3800 ಹಾಗೂ ರಾಜ್ಯ ಸರ್ಕಾರದಿಂದ 6000 ರೂ. ನೀಡಲಾಗುವುದು ಎಂದು ತಿಳಿಸಿದರು.