ಹಾಸನದಲ್ಲಿ ಹಾಡಹಗಲೇ ಕೊಲೆ

ಹಾಸನದಲ್ಲಿ ಹಾಡಹಗಲೇ ಕೊಲೆ

ಹಾಸನ, . 30 :  ಚನ್ನರಾಯಪಟ್ಟಣದಲ್ಲಿ ಹಾಡಹಗಲೇ ದುಷ್ಕರ್ಮಿಗಳು ಯುವಕನಿಗೆ ನಡು ರಸ್ತೆಯಲ್ಲೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಭಿಷೇಕ್ (24)ಕೊಲೆಯಾದ ಯುವಕ. ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಅಭಿಷೇಕ್  ಜಾಮೀನಿನ ಮೇಲೆ ಹೊರ ಬಂದಿದ್ದನು.

ಮೊನ್ನೆ ರಾತ್ರಿ ಗೂರಮಾರನಹಳ್ಳಿಯಲ್ಲಿ ಈತ ಗಲಾಟೆ ಮಾಡಿಕೊಂಡಿದ್ದನು. ಇದೇ ದ್ವೇಷದಿಂದ ಅಭಿಷೇಕ್ ಕೊಲೆಗೆ ಸಂಚು ರೂಪಿಸಿದ್ದ ಗುಂಪು, ನಿನ್ನೆ ಬೆಳಗ್ಗೆ ಚನ್ನರಾಯಪಟ್ಟಣದ ಕಾಳಿಕಾಂಭ ವೃತ್ತದ ಬಳಿ ಹೊಂಚು ಹಾಕಿ ಅಭಿಷೇಕ್ ಬರುತ್ತಿದ್ದಂತೆ ಏಕಾಏಕಿ ಚಾಕುವಿನಿಂದ ಈತನ ಮೇಲೆ ದಾಳಿ ಮಾಡಿ ಮನಬಂದಂತೆ ಇರಿದು ಪರಾರಿಯಾಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos