ಹುಬ್ಬಳ್ಳಿ ಹುಲಿ ವಿಶ್ವನಾಥ್ ಸಜ್ಜನರ್ ಕನ್ನಡದಲ್ಲೇ ಮಾಹಿತಿ

ಹುಬ್ಬಳ್ಳಿ ಹುಲಿ ವಿಶ್ವನಾಥ್ ಸಜ್ಜನರ್ ಕನ್ನಡದಲ್ಲೇ ಮಾಹಿತಿ

ಹೈದರಾಬಾದ್, ಡಿ. 06: ದಿಶಾ ಹತ್ಯಾಚಾರ ಆರೋಪಿಗಳ ಎನ್ಕೌಂಟರ್ ಕುರಿತು ಸೈಬರಾಬಾದ್ ಪೊಲೀಸ್ ಆಯುಕ್ತ, ಕನ್ನಡಿಗ ವಿಶ್ವನಾಥ್ ಸಜ್ಜನರ್ ಮಾಹಿತಿ ನೀಡಿದ್ದಾರೆ. ದಿಶಾ ಅತ್ಯಾಚಾರ ಹಾಗೂ ಹತ್ಯೆ, ಆರೋಪಿಗಳ ಬಂಧನ, ತನಿಖೆ ಹಾಗೂ ಎನ್ಕೌಂಟರ್ ಕುರಿತು ವಿಶ್ವನಾಥ್ ಸುದೀರ್ಘವಾಗಿ ಮಾಹಿತಿ ನೀಡಿದರು. ಘಟನೆಯ ಮರುಸೃಷ್ಟಿಗಾಗಿ ಆರೋಪಿಗಳನ್ನು ಘಟನಾ ಸ್ಥಳಕ್ಕೆ ಭೇಟಿ ನೀಡಿದಾಗ, ಆರೋಪಿಗಳು ಪೊಲೀಸರ ಗನ್ ಕಸಿದುಕೊಂಡು ಗುಂಡು ಹಾರಿಸಿದರು ಎಂದು ವಿಶ್ವನಾಥ್ ಸ್ಪಷ್ಟಪಡಿಸಿದರು. ಈ ವೇಳೆ ಶರಣಾಗುವಂತೆ ಮಾಡಿದ ಮನವಿಗೆ ಸ್ಪಂದಿಸದೇ ಇದ್ದಾಗ ಆತ್ಮರಕ್ಷಣೆಗಾಗಿ ಪೋಲೀಸರು ಹಾರಿಸಿದ ಗುಂಡಿನಿಂದ ಎಲ್ಲಾ ನಾಲ್ವರು ಆರೋಪಿಗಳು ಹತರಾದರು ಎಂದು ಅವರು ಹೇಳಿದರು. ಹುಬ್ಬಳ್ಳಿ ಮೂಲದವರಾದ ವಿಶ್ವನಾಥ್ ಕನ್ನಡದಲ್ಲೂ ಘಟನೆಯ ಸಂಪೂರ್ಣ ಮಾಹಿತಿ ನೀಡಿದ್ದು ವಿಶೇಷವಾಗಿತ್ತು.

ಫ್ರೆಶ್ ನ್ಯೂಸ್

Latest Posts

Featured Videos