ಬಾಂಬ್ ಸ್ಫೋಟ: ಆರೋಪಿ ಒಂದು ಹಂತಕ್ಕೆ ಪತ್ತೆ: ಗೃಹ ಸಚಿವ!

ಬಾಂಬ್ ಸ್ಫೋಟ: ಆರೋಪಿ ಒಂದು ಹಂತಕ್ಕೆ ಪತ್ತೆ: ಗೃಹ ಸಚಿವ!

ಬೆಂಗಳೂರು: ಬೆಂಗಳೂರಿನಲ್ಲಿ ಸ್ಫೋಟ ಸಂಭವಿಸಿದ 8 ದಿನಗಳ ನಂತರ ರಾಮೇಶ್ವರಂ ಕೆಫೆ ಪುನರಾರಂಭಗೊಂಡಿದೆ. ಕಳೆದ ಮಾರ್ಚ್ 1 ರಂದು ಮಧ್ಯಾನ 1.09ರ ಸುಮಾರಿಗೆ ಇದೇ ಸ್ಥಳದಲ್ಲಿ ಸ್ಫೋಟ ಸಂಭವಿಸಿ ಕನಿಷ್ಠ 10 ಜನರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು.. ಇಡೀ ಬೆಂಗಳೂರು ಈ ಬ್ಲಾಸ್ಟ್ ನಿಂದ ಬೆಚ್ಚಿಬಿದ್ದಿತ್ತು.

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಆರೋಪಿ ಒಂದು ಹಂತಕ್ಕೆ ಪತ್ತೆಯಾಗಿದ್ದಾನೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ. ಇಂದು ಸುದ್ದಿಗಾರರ ಜೊತೆ ಮಾತನಾಡಿದ ಗೃಹ ಸಚಿವ ಜಿ ಪರಮೇಶ್ವರ್ ಆರೋಪಿ ಒಂದು ಹಂತಕ್ಕೆ ಪತ್ತೆಯಾಗಿದ್ದಾನೆ ಅದನ್ನು ಕಂಫಾರ್ಮ್ ಮಾಡ್ಕೋಬೇಕು ಯಾರು ಅಂತ ಸಂಜೆ ಒಳಗೆ ಗೊತ್ತಾಗುತ್ತದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಆರೋಪಿಯ ಪತ್ತೆಗಾಗಿ ಎನ್ ಐ ಎ ಅಧಿಕಾರಿಗಳು ತೀವ್ರ ಶೋಧ ನಡೆಸುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos