ವಿಜಯಪುರ, ಅ.20 : ಮನೆಯಲ್ಲಿ ಮಲಗಿದ್ದ ಮಗು ಹೆಗ್ಗಣ ಕಚ್ಚಿ ಮೃತಪಟ್ಟಿರುವ ಘಟನೆ ಕಲಕೇರಿ ಪೊಲೀಸ್ ಠಾಣೆ ವ್ಶಾಪ್ತಿಯಲ್ಲಿ ಘಟನೆ ನಡೆದಿದೆ.
ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಹೊಸೂರ ಗ್ರಾಮ ಗೀತಾ-ಗೋಲಪ್ಪ ದಂಪತಿಗಳ 6 ತಿಂಗಳ ಮಗು ಸಾವನ್ನಪ್ಪಿದೆ. ಮೂಲತಃ ಸಿಂದಗಿ ತಾಲೂಕಿನ ಸುರಗಿಹಳ್ಳಿ ನಿವಾಸಿಗಳಾಗಿದ್ದ ಈ ದಂಪತಿ ಹಬ್ಬಕ್ಕೆಂದು ಗೀತಾ ತವರು ಮನೆಗೆ ಬಂದಿದ್ದಳು.
ಶನಿವಾರ ರಾತ್ರಿ ಗಂಡ-ಹೆಂಡತಿ ಪಕ್ಕದಲ್ಲೇ ಮಲಗಿದ್ದ ವೇಳೆ ಹೆಗ್ಗಣ ಮಗುವಿನ ಬಲಗಾಲಿಗೆ ಕಚ್ಚಿದೆ. ಹೆಗ್ಗಣ ಕಚ್ಚಿದ್ದರಿಂದ ಮಗು ಕೊಸರಾಟ ನಡೆಸಿದಾಗ ಮುಖ ಕೆಳಗೆ ಮಾಡಿ ಬಿದ್ದು ಉಸಿರುಗಟ್ಟಿ ಸಾವನ್ನಪ್ಪಿದೆ.
ಮಗುವನ್ನು ಕಳೆದುಕೊಂಡ ಕುಟುಂಬದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.