ಹೆಚ್.ಡಿ.ಕೆ ಗೆ ಮಂಡ್ಯದಲ್ಲಿ ಸೋಲಿನ ಭಯ : ಬಿಎಸ್ ವೈ

ಹೆಚ್.ಡಿ.ಕೆ ಗೆ ಮಂಡ್ಯದಲ್ಲಿ ಸೋಲಿನ ಭಯ : ಬಿಎಸ್ ವೈ

ಮಂಡ್ಯ, ಮಾ.25, ನ್ಯೂಸ್ ಎಕ್ಸ್ ಪ್ರೆಸ್ : ಮಂಡ್ಯ ಲೋಕಸಭಾ ಚುನಾವಣೆಯು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಸೋಲಿನ ಭಯದಿಂದ ನಟಾರಾದ ದರ್ಶನ್ ಮತ್ತು ಯಶ್ ಗೆ ಕಳ್ಳ ಜೋಡಿ ಎತ್ತು ಎಂದು ಹೇಳುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಲಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಬೆಂಬಲಕ್ಕೆ ನಿಂತಿರುವ ನಟ ದರ್ಶನ್ ಹಾಗೂ ಯಶ್ ರನ್ನು ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕಳ್ಳ ಜೊಡೆತ್ತು ಎಂದು ಕರೆದಿದ್ದರು. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಿಎಸ್ ವೈ, ಸೋಲಿನ ಭಯದಿಂದ ಸಿಎಂ ಹೆಚ್.ಡಿಕೆ ಅವರು ಈ ರೀತಿ ಹೇಳಿದ್ದಾರೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos