ಹೆಣ್ಣುಮಕ್ಕಳು ದಾರಿತಪ್ಪಿದ್ದಾರೆ ಹೇಳಿಕೆಗೆ ಹೆಚ್‌ಡಿಕೆ ವಿಷಾದ

ಹೆಣ್ಣುಮಕ್ಕಳು ದಾರಿತಪ್ಪಿದ್ದಾರೆ ಹೇಳಿಕೆಗೆ ಹೆಚ್‌ಡಿಕೆ ವಿಷಾದ

ಬೆಂಗಳೂರು: ತುಮಕೂರು ಚುನಾವಣಾ ಪ್ರಚಾರದ ರೋಡ್‌ ಶೋನಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಜೆಡಿಎಸ್‌ ನಾಯಕ ಹೆಚ್‌ಡಿ ಕುಮಾರಸ್ವಾಮಿ, ಕಾಂಗ್ರೆಸ್ ಜಾರಿಗೆ ತಂದಿರುವ ಗ್ಯಾರಂಟಿಗಳಿಂದ ಹಳ್ಳಿ ಹೆಣ್ಣುಮಕ್ಕಳು ದಾರಿ ತಪ್ಪಿದ್ದಾರೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ರಾಜ್ಯದ ಯಾವುದೇ ಮಹಿಳೆಗೆ ನೋವು ಮಾಡಿಲ್ಲ, ನನ್ನ ಹೇಳಿಕೆಯಿಂದ ಒಂದು ವೇಳೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ನನಗೆ ಪ್ರತಿಷ್ಠೆ ಇಲ್ಲ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದವನ್ನು ವ್ಯಕ್ತಪಡಿಸುತ್ತೇನೆ ಎಂದು ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದರು.

ನಾಡಿನ ಜನತೆಗೆ ಹೇಳಿದ್ದು ಎಚ್ಚರಿಕೆಯಿಂದ ತೀರ್ಮಾನ ಮಾಡಿ ಅಂತ, ನಿಮ್ಮ ಬದುಕನ್ನು ಇವತ್ತು ಹಾಳು ಮಾಡುತ್ತಾರೆ. ಬದುಕು ಎಂದರೆ ಬೇರೆ ರೀತಿಯಲ್ಲ ಹೇಳಿದ್ದು. ಕುಟುಂಬದ ಬದುಕಿನ ಬಗ್ಗೆ ಹೇಳಿರೋದು. ಪಂಚರತ್ನ ಕಾರ್ಯಕ್ರಮಗಳ ಬಗ್ಗೆ ಹೇಳಿದ್ದೇನೆ, ಉಚಿತ ಶಾಲೆ, ಆಸ್ಪತ್ರೆ, ರೈತರ ಬದುಕನ್ನ ಸರಿಪಡಿಸಬೇಕು, ಜನರು ಆರ್ಥಿಕ ಸದೃಢವಾಗಿ ಬೆಳೆಯಬೇಕೆಂದು ಹೇಳಿದ್ದೇನೆ ಎಂದು ತಮ್ಮ ಮಾತಿಗೆ ಸ್ಪಷ್ಟನೆ ನೀಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos